Advertisement

ಕೈ-ಕಮಲ ಮುಖಂಡರ ಮತ ಬೇಟೆ

09:01 PM Mar 27, 2021 | Team Udayavani |

ಮಸ್ಕಿ: ಚುನಾವಣೆಯಲ್ಲಿ ಮತದಾರರಿಗೆ ಹಂಚುವ ದುಡ್ಡು ಪಾಪದ ದುಡ್ಡು. ಇದನ್ನು ಯಾರೂ ಮುಟ್ಟಬಾರದು ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಭೋಸರಾಜು ಹೇಳಿದರು.

Advertisement

ತಾಲೂಕಿನ ತೋರಣದಿನ್ನಿ ಜಿಪಂ ವ್ಯಾಪ್ತಿಯ ಗಾಳಿದುರ್ಗಮ್ಮ ಕ್ಯಾಂಪ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಬಸನಗೌಡ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾರರನ್ನು ಖರೀದಿ ಮಾಡುವುದು ದೊಡ್ಡ ಅಪರಾಧ. ಹಣ ಹಂಚುವ ಮೂಲಕ ಜನರನ್ನು ಖರೀದಿ ಮಾಡುತ್ತೇವೆ ಎನ್ನುವುದು ಮೂರ್ಖತನ. ಆದರೆ ಈ ಚುನಾವಣೆಯಲ್ಲಿ ಹಂಚುವ ಹಣ ಅದು ಪಾಪದ ಹಣ. ಬಿಜೆಪಿಯೇ ಆಗಲಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೇ ಆಗಲಿ ಯಾವ ಪಕ್ಷ ಹಂಚಿದರೂ ಅದು ಪಾಪದ ರೊಕ್ಕ. ಜನ ಇದನ್ನು ಗುಡಿ-ಗುಂಡಾರಕ್ಕೂ ಮತ್ತೂಂದು ಒಳ್ಳೆಯ ಕಾರ್ಯಕ್ಕೋ ಬಳಸಬೇಕು. ಯಾರು ಎಷ್ಟು ದೊಡ್ಡ ಕೊಟ್ಟರೂ ಅದನ್ನು ಪಡೆದು ಒಳ್ಳೆಯ ವ್ಯಕ್ತಿಗಳಿಗೆ ಮಾತ್ರ ಮತ ಹಾಕಬೇಕು. ಅದರಲ್ಲೂ ಈ ಬಾರಿ ಉಪಚುನಾವಣೆಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಅವರ ಹಣದ ಅಹಂಕಾರಕ್ಕೆ ಬುದ್ಧಿ ಕಲಿಸಬೇಕು. ಬಸನಗೌಡ ತುರುವಿಹಾಳ ಅವರಿಗೆ ವೋಟ್‌ ಹಾಕಬೇಕು ಎಂದು ಮನವಿ ಮಾಡಿದರು.

ಸಂಸದ ಆರ್‌.ದೃವನಾರಾಯಣ ಮಾತನಾಡಿ, ಬಿಜೆಪಿ ಯಾವತ್ತೂ ಸ್ವಂತ ಬಲದ ಮೇಲೆ ಅ ಧಿಕಾರಕ್ಕೆ ಬಂದಿಲ್ಲ. ವಾಮ ಮಾರ್ಗದಿಂದ ಅ ಧಿಕಾರಕ್ಕೆ ಬಂದರೂ ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ. 2008ರ ಅವಧಿ ಯಲ್ಲೂ ಹೀಗೆ ಹಲವು ಶಾಸಕರು ಭ್ರಷ್ಟಾಚಾರ, ಸೆಕ್ಸ್‌ ಹಗರಣದಲ್ಲಿ ಸಿಲುಕಿ ತಮ್ಮ ಸಂಸ್ಕೃತಿ ಹೊರ ಹಾಕಿದ್ದರು. ಈಗಲೂ ಅದೇ ನಡೆದಿದೆ ಎಂದು ಲೇವಡಿ ಮಾಡಿದರು. ಅಭ್ಯರ್ಥಿ ಆರ್‌.ಬಸನಗೌಡ ತುರುವಿಹಾಳ ಮಾತನಾಡಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹಿಂದೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಳ್ಳತನದ ವೋಟ್‌ಗಳ ಮೂಲಕ ಗೆದ್ದಿದ್ದರು. ಅವರು ಸಕ್ರಮವಾಗಿ ಚುನಾವಣೆ ಮಾಡಿಲ್ಲ. ಹೀಗಾಗಿ ಈ ಬಾರಿ ಮತ್ತೆ ಅವರಿಗೆ ಬುದ್ಧಿ ಕಲಿಸುವ ದಿನ ಬಹುಬೇಗ ಹತ್ತಿರ ಬಂದಿದೆ. 365 ದಿನವೂ ನಿಮ್ಮ ಸೇವೆಯಲ್ಲಿ ಇರುತ್ತೇನೆ ಎಂದು ಹೇಳಿದರು.

ಶಾಸಕ ಬಸನಗೌಡ ದದ್ದಲ, ಮಾಜಿ ಶಾಸಕ ಹಂಪಯ್ಯ ನಾಯಕ, ಕಾಂಗ್ರೆಸ್‌ ಮುಖಂಡ ಕೆ.ಕರಿಯಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌, ಕಿರಲಿಗಂಪ್ಪ ಸೇರಿ ಇತರರು ಇದ್ದರು. ಕುರುಕುಂದಿ-ತಿಡಿಗೋಳದಲ್ಲಿ ಬಿಜೆಪಿ ಪ್ರಚಾರ ಸಿಂಧನೂರು: ತುಂಗಭದ್ರಾ ಜಲಾಶಯದ ಕಾಲುವೆಗಳ ಆಧುನೀಕರಣ ಕೆಲಸಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ ಕೀರ್ತಿ ಬಿ.ಎಸ್‌. ಯಡಿಯೂರಪ್ಪ ಸರಕಾರಕ್ಕೆ ಸಲ್ಲುತ್ತದೆ. ನೀರಾವರಿ ವಿಷಯದಲ್ಲಿ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್‌ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಮಸ್ಕಿ ಉಪಚುನಾವಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮಾತುಕೊಟ್ಟರೆ ತಪ್ಪದ ನಾಯಕ ಯಾರಾದರೂ ಇದ್ದರೆ, ಅದು ಬಿಎಸ್‌ವೈ ಮಾತ್ರ. ಅವರು ಈ ಭಾಗದ ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ 2ನೇ ಬೆಳೆಗೆ ನೀರು ತಪ್ಪುವ ಭೀತಿ ಹೋಗಲಾಡಿಸಲು ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಪ್ರತಾಪಗೌಡರನ್ನು ಗೆಲ್ಲಿಸಿದರೆ, ಅವರು ಮಂತ್ರಿಯಾಗುತ್ತಾರೆ. ಆಗ ನಾವೆಲ್ಲ ಸೇರಿ ಸರಕಾರದ ಮೇಲೆ ಒತ್ತಡ ತಂದು ನವಲಿ ಜಲಾಶಯದ ಕೆಲಸವನ್ನು ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ. ಬೇರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದರೆ, ಯಾವುದೇ ಪ್ರಯೋಜನವಿಲ್ಲ ಎಂದರು.

Advertisement

ವಿರೋಧಿ ಗಳ ಆರೋಪದಲ್ಲಿ ಹುರುಳಿಲ್ಲ:

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಮಾತನಾಡಿ, ಹಣಕ್ಕಾಗಿ ಬಿಜೆಪಿಗೆ ಹೋಗಿದ್ದಾರೆಂಬ ನಮ್ಮ ವಿರೋ ಧಿಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಿಂದಿನ ಚುನಾವಣೆಯಲ್ಲಿ ನಮ್ಮ ಪ್ರತಿಸ್ಪ  ರ್ಧಿಗೆ 60 ಸಾವಿರ ಮತ ಬಿದ್ದಾಗ ನಮಗೂ ಅಚ್ಚರಿಯಾಗಿತ್ತು. ಅದು ಅವರ ಮೇಲಿನ ಅಭಿಮಾನದ ಮತಗಳಲ್ಲ. ಬದಲಿಗೆ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿ  ಕಾರಕ್ಕೆ ತರಬೇಕೆಂಬ ಮತಗಳಾಗಿದ್ದವು. ಜನರ ನಾಡಿಮಿಡಿತವನ್ನು ಅರಿತು ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಬಿಜೆಪಿ ಸೇರಬೇಕಾಯಿತು. ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ಋಣಕ್ಕಾಗಿ ಸಿಎಂ, ಕಳೆದ ಒಂದೂವರೆ ವರ್ಷದಲ್ಲೇ ಕ್ಷೇತ್ರಕ್ಕೆ ಸಿಎಂ 1200 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು, ಬಿಎಸ್‌ವೈ ಶಕ್ತಿಯನ್ನು ಬಲಪಡಿಸಲು ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ ಅವರು ಮಾತನಾಡಿ, ಬಿಜೆಪಿ ಅಭ್ಯìಥಿಯನ್ನು ಯಾಕೆ ಗೆಲ್ಲಿಸಬೇಕು. ಅವರು ಗೆದ್ದರೆ ಕ್ಷೇತ್ರಕ್ಕೆ ಆಗುವ ಅನುಕೂಲಗಳನ್ನು ವಿವರಿಸಿದರು. ಜಿಪಂ ಅಧ್ಯಕ್ಷೆ ಆದಿಮನೆ ವೀರಲಕ್ಷಿŒ, ಜಿಪಂ ಸದಸ್ಯ ಎನ್‌.ಶಿವನಗೌಡ ಗೋರೆಬಾಳ, ಬಸವರಾಜಗೌಡ ಕುರುಕುಂದಿ ಇದ್ದರು. ಅದ್ಧೂರಿ ಮೆರವಣಿಗೆ: ಬಿಜೆಪಿ ಅಭ್ಯರ್ಥಿ ಗ್ರಾಮಕ್ಕೆ ಕಾಲಿಟ್ಟಾಗ ಕುರುಕುಂದಾ, ತಿಡಿಗೋಳ ಸೇರಿದಂತೆ ಈ ಮಾರ್ಗದ ಗ್ರಾಮಗಳಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next