Advertisement

ಸಹೋದರಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ ಸಹೋದರನನ್ನೇ ಚಾಕುವಿನಿಂದ ಇರಿದು ಹತ್ಯೆ

01:08 PM Jun 24, 2023 | Team Udayavani |

ಮಸ್ಕಿ: ಸಹೋದರಿಗೆ ಲೈಂಗಿಕ ಕಿರುಕುಳ ಪ್ರಶ್ನಿಸಿದ ಸಹೋದರನ ಭೀಕರ ಕೊಲೆಗೈದ ಘಟನೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ‌ ನಡೆದಿದೆ.

Advertisement

ಕೊಲೆಯಾದ ಯುವಕ ದೇವರಾಜ (22) ಎಂದು ಗುರುತಿಸಲಾಗಿದೆ.

ಲೈಂಗಿಕ‌ ಕಿರುಕುಳ ವಿಚಾರದ ಬಗ್ಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಮೃತ ದೇವರಾಜ ಎನ್ನುವ ಯುವಕನ ಸಹೋದರಿಗೆ ಅದೇ ಗ್ರಾಮದ ಬಸವರಾಜ ಎನ್ನುವ ಯುವಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಪರಸ್ಪರ ಎರಡು ಗುಂಪುಗಳ‌ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ದೇವರಾಜ ಎನ್ನುವವರಿಗೆ ಚಾಕು ಇರಿಯಲಾಗಿದೆ. ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಘಟನೆಯಲ್ಲಿ ಗಾಯಗೊಂಡ ಇನ್ನೂ ಮೂವರನ್ನು ಮಸ್ಕಿ ಆಸ್ಪತ್ರೆಗೆ ‌ದಾಖಲಿಸಲಾಗಿದೆ.

ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ತೀರ್ಥಹಳ್ಳಿ: ಪ್ರಯಾಣಿಕನಿಗೆ ಹೃದಯಾಘಾತ… ಸಮಯಪ್ರಜ್ಞೆ ಮೆರೆದ ಬಸ್ ಚಾಲಕ, ನಿರ್ವಾಹಕ

Advertisement
Advertisement

Udayavani is now on Telegram. Click here to join our channel and stay updated with the latest news.

Next