ಮಾಡಿದ್ದರು. ವಿವಿಧ ವಸತಿ ಯೋಜನೆಯಲ್ಲಿ ನಿರ್ಮಿಸಿಕೊಂಡ ಮನೆಗಳ ಬಾಕಿ ಮೊತ್ತ ಬಿಡುಗಡೆ ಜತೆಗೆ ಮಸ್ಕಿ ಮತ್ತು ಬಸವ ಕಲ್ಯಾಣಕ್ಕೆ ತಲಾ 7500ರಂತೆ 15,000 ಮನೆಗಳನ್ನು ಸರಕಾರ ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದರು.
Advertisement
ಸಚಿವರ ಹೇಳಿಕೆ ಬೆನ್ನಲ್ಲೇ ರಾಜೀವ್ಗಾಂಧಿ ವಸತಿ ನಿಗಮ ಆದೇಶ ಹೊರಡಿಸಿ ವಿಶೇಷ ಪ್ರಕರಣದಡಿ ಮಸ್ಕಿ ಮತ್ತು ಬಸವಕಲ್ಯಾಣಕ್ಕೆ ವಿವಿಧ ಯೋಜನೆಗಳಲ್ಲಿ ತಲಾ 7500 ಮನೆಗಳನ್ನು ಹಂಚಿಕೆ ಮಾಡಿತು. ಆದರೆ ಗ್ರಾಪಂ ಚುನಾವಣೆ ಘೋಷಣೆಯಾಗಿದ್ದರಿಂದ ನೀತಿ ಸಂಹಿತೆ ಜಾರಿಯಾಗಿ ಈ ಮನೆಗಳ ಹಂಚಿಕೆಗೆ ಬ್ರೇಕ್ ಬಿದ್ದಿತ್ತು. ಈಗ ಚುನಾವಣೆ ಮುಗಿದಿದೆ. ಆದರೆ ಈ ಬಗ್ಗೆ ಸರಕಾರ, ರಾಜೀವ ಗಾಂಧಿ ವಸತಿ ನಿಗಮ ಇದುವರೆಗೂ ಯಾವುದೇ ಪ್ರಗತಿ ನಡೆಸಿಲ್ಲ. ಕೇವಲ ಮನೆಗಳನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ಆದೇಶ ಬಿಟ್ಟರೆ ಇದುವರೆಗೂ ಬೇರೆ ಪತ್ರ ವ್ಯವಹಾರ ನಡೆದಿಲ್ಲ.
ರಾಜೀವ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ. ಆಧಾರ್ ಕಾರ್ಡ್ ಲಿಂಕ್ ಇರದೇ ಇರುವುದು, ಫಲಾನುಭವಿಗಳ ಬ್ಯಾಂಕ್ ಖಾತೆ ಬದಲಾವಣೆ ಸೇರಿ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದೆ. ಈ ಸಮಸ್ಯೆ ಪಟ್ಟಿ ಮಾಡಿ ಸರಿ ಮಾಡಿ ವರದಿ ನೀಡಲು ಆಯಾ ಪಂಚಾಯಿತಿ ಅಧಿಕಾರಿಗಳಿಗೆ ನಿಗಮ ಸೂಚಿಸಿದೆ. ಆದರೆ ಇದುವರೆಗೂ ಪಿಡಿಒಗಳು ಈ ಬಗ್ಗೆ ಗಮನ ಹರಿಸದೇ ಇರುವುದರಿಂದ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಮತ್ತೆ ಅಲೆದಾಟವೇ ಗತಿಯಾಗಿದೆ.
Related Articles
Advertisement