Advertisement

Maski ಅಲಾಯಿ ಕುಣಿಯ ಬೆಂಕಿಯಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

09:08 PM Jul 16, 2024 | Team Udayavani |

ಮಸ್ಕಿ: ಮೊಹರಂ ಹಬ್ಬದ ನಿಮಿತ್ತ ಅಲಾಯಿ ಕುಣಿಯಲ್ಲಿ ಅಗ್ನಿ ಪ್ರವೇಶ ಮಾಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬೊಮ್ಮನಾಳ-ಯು. ಗ್ರಾಮದಲ್ಲಿ ನಡೆದಿದೆ.

Advertisement

ಯಮನಪ್ಪ ನಾಯಕ (45) ಮೃತ ವ್ಯಕ್ತಿ. ಮಸ್ಕಿ ತಾಲೂಕಿನ ಬೊಮ್ಮನಾಳ-ಯು. ಗ್ರಾಮದ ಮಸೀದಿ ಮುಂಭಾಗದಲ್ಲಿ ಹಾಕಿದ್ದ ಅಲಾಯಿ ಕುಣಿಯಲ್ಲಿ ಅಗ್ನಿ ಪ್ರವೇಶ ಮಾಡುವಾಗ ಕುಣಿಯಲ್ಲಿನ ಕಟ್ಟಿಗೆ ಕಾಲಿಗೆ ಸಿಲುಕಿ ಬಿದ್ದು ಮೃತಪಟ್ಟಿದ್ದಾನೆ.

ಈ ಕುರಿತು ತುರವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಸುಜಾತ ಅವರು ತಿಳಿಸಿದ್ದಾರೆ.

https://youtu.be/mDSu_yOaV3Q 

Advertisement

Udayavani is now on Telegram. Click here to join our channel and stay updated with the latest news.

Next