Advertisement
ತಿಂಗಳಿಗೆ ಕನಿಷ್ಠ 25 ಸಾವಿರದಿಂದ ಗರಿಷ್ಠ 90 ಸಾವಿರ ರೂ.ಗಳನ್ನು ಈ ಮಾರ್ಷಲ್ಗಳಿಗೆ ಸಂಭಾವನೆ ರೂಪದಲ್ಲಿ ನೀಡಲು ಉದ್ದೇಶಿಸಲಾಗಿದೆ. ಇದಲ್ಲದೆ, ವರ್ಷಕ್ಕೆ ಎರಡು ಜೊತೆ ಸಮವಸ್ತ್ರ, ಶೂ, ಬೆಲ್ಟ್, ಟೋಪಿ, ಮೊಬೈಲ್ ಸಿಮ್ ಕಾರ್ಡ್ (500ರಿಂದ 1000 ರೂ. ಕರೆನ್ಸಿ), ಓಡಾಡಲು ಪ್ರತಿ ನೂರು ಕಿ.ಮೀ.ಗೆ 1.5ಯಿಂದ 2 ಲೀ. ಪೆಟ್ರೋಲ್ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧದ ಪ್ರಸ್ತಾವನೆ ಮಂಗಳ ವಾರ ನಡೆಯುವ ಮಾಸಿಕ ಬಿಬಿಎಂಪಿ ಸಾಮಾನ್ಯ ಸಭೆಯ ಕಾರ್ಯಸೂಚಿಯ ಲ್ಲಿದ್ದು, ಚರ್ಚೆಗೆ ಬರುವ ಸಾಧ್ಯತೆ ಇದೆ.
Related Articles
Advertisement
ಘನತ್ಯಾಜ್ಯ ನಿರ್ವಹಣೆಗೆ ಸಾರ್ವ ಜನಿಕರ ಸಹಭಾಗಿತ್ವದ ಬಗ್ಗೆ ಅರಿವು ಮೂಡಿಸಲು 360 ಸಂಪರ್ಕ ಕಾರ್ಯ ಕರ್ತೆಯರ ನಿಯೋಜನೆ, 50ರಿಂದ 100 ಟನ್ ಸಾಮರ್ಥ್ಯದ ಕಸ ವಿಕೇಂದ್ರಿತ ಘಟಕಗಳು ಮತ್ತು 500 ಮೆಟ್ರಿಕ್ ಟನ್ ಸಾಮರ್ಥ್ಯದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆಗೆ ಸಂಬಂಧಿಸಿದ ಯೋಜನೆಯ ಪ್ರಸ್ತಾಪ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ತೆರಿಗೆ ಪಾವತಿಸದ ಸಂಸ್ಥೆಗಳಿಗೆ ಸ್ಕೈವಾಕ್ ಗುತ್ತಿಗೆ: ಆಕ್ಷೇಪ ಬೆಂಗಳೂರು: ನಗರದ ವಿವಿಧೆಡೆ 16 ಸ್ಕೈವಾಕ್ಗಳ ನಿರ್ಮಾಣ ಗುತ್ತಿಗೆಯನ್ನು ತೆರಿಗೆ ಬಾಕಿ ಉಳಿಸಿಕೊಂಡಿರುವ ಮೂರು ಸಂಸ್ಥೆಗಳಿಗೆ ನೀಡಲು ಮುಂದಾಗಿದ್ದು ಇದು ಟೆಂಡರ್ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಲಿಕೆಯ ಲೆಕ್ಕಪತ್ರ ಸ್ಥಾಯಿಸಮಿತಿ ಅಧ್ಯಕ್ಷೆ ನೇತ್ರಾ ನಾರಾಯಣ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮ ಉಲ್ಲಂ ಸಿ ಗುತ್ತಿಗೆ ನೀಡಲು ಕಾರಣರಾಗಿರುವ ಕಾರ್ಯನಿರ್ವಾಹಕ ಎಂಜಿನಿಯರ್ (ಜಾಹಿರಾತು) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಿಯಮಗಳ ಪ್ರಕಾರ ಟೆಂಡರ್ ಪಡೆಯಲು ಅನರ್ಹವಾಗಿರುವ ಸಂಸ್ಥೆಗಳಿಗೆ ಸ್ಕೈವಾಕ್ ನಿರ್ಮಾಣಕ್ಕೆ ಸಂಬಂಧಿಸಿದ ಗುತ್ತಿಗೆಯನ್ನು ಸಿಂಗಲ್ ಪ್ಯಾಕೇಜ್ನಡಿ ತರಾತುರಿಯಲ್ಲಿ ನೀಡಲಾಗಿದ್ದು, ನಗರ ಯೋಜನಾ ಸಮಿತಿ ಅನುಮತಿಯನ್ನೂ ಪಡೆಯದೆ ನೇರವಾಗಿ ಮಾಸಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲು ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಆಯುಕ್ತರಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು: ಬಿಬಿಎಂಪಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ಪಾಲಿಕೆ ಮಾಸಿಕ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಎಚ್ಎಂಟಿ ವಾರ್ಡ್ನ ಆಶಾ ಸುರೇಶ್ ವಿರುದ್ಧದ ದೂರು ಹೈಕೋರ್ಟ್ ತಲುಪಿದೆ. ಈ ಸಂಬಂಧ ವಿವರಣೆ ಕೋರಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತ ಪಕ್ಷದ ನಾಯಕ ಆರ್.ಎಸ್ ಸತ್ಯನಾರಾಯಣ ಹಾಗೂ ಆಶಾ ಸುರೇಶ್ಗೆ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿದೆ. ಈ ಸಂಬಂಧ ಯಶವಂತಪುರದ ಎನ್ ನಂಜುಂಡಪ್ಪ ಎಂಬುವವರು, ಆಶಾ ಸುರೇಶ್ ಕಾರ್ಪೋರೇಟರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ಬಿಬಿಎಂಪಿ ಮಾಸಿಕ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಸದಸ್ಯ ಸ್ಥಾನ್ಕಕ್ಕೆ ರಾಜೀನಾಮೆ ನೀಡಿದ ಬಳಿಕ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಹೀಗಾಗಿ ಕೂಡಲೇ ಆಶಾ ಸುರೇಶ್ ಅವರಿಗೆ ಬಿಬಿಎಂಪಿಯ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.