Advertisement

ಕ್ರೈಮ್‌ ಥ್ರಿಲ್ಲರ್‌ ಮಾರಿಗೋಲ್ಡ್‌

04:14 PM Sep 10, 2021 | Team Udayavani |

“ಮಾರಿಗೋಲ್ಡ್‌’- ಹೀಗೊಂದು ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ದಿಗಂತ್‌ ನಾಯಕರಾಗಿರುವ ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿ. ಆರ್‌.ವಿ.ಕ್ರಿಯೇಷನ್ಸ್‌ ಮೂಲಕ ರಘುವರ್ಧನ್‌ ಫಿಲಂಸ್‌
ಬ್ಯಾನರ್‌ನಲ್ಲಿ ರಘುವರ್ಧನ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Advertisement

ರಘುವರ್ಧನ್‌ ಅವರು ಮೂಲತಃ ನಿರ್ದೇಶಕರಾಗಿದ್ದು, ಈ ಹಿಂದೆ ತಿಮ್ಮರಾಯ, ಬದ್ರಿ, ಗುಣವಂತ, ಮಿಸ್ಟರ್‌ ಎಲ್‌. ಎಲ್‌.ಬಿ. ಮೊದಲಾದ ಚಿತ್ರಗಳನ್ನು ರಘುವರ್ಧನ್‌ ನಿರ್ದೇಶಿಸಿದ್ದಾರೆ. ಈಗ ಹೊಸ ನಿರ್ದೇಶಕ ರಾಘವೇಂದ್ರ ಎಂ.ನಾಯಕ್‌ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಸಿನಿಮಾ ಮೂಡಿಬಂದಿರುವ ಬಗ್ಗೆ ನಿರ್ಮಾಪಕ ರಘುವರ್ಧನ್‌ ಖುಷಿಯಾಗಿದ್ದಾರೆ. “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಸಾಕಷ್ಟು ಹೊಸ ವಿಚಾರದೊಂದಿಗೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದೇವೆ. ಕ್ರೈಮ್‌ ಥ್ರಿಲ್ಲರ್‌ ಜಾನರ್‌ಗೆ ಸೇರಿದ ಸಿನಿಮಾ ಇದಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದೆ. ಈ ತಿಂಗಳಾಂತ್ಯದಲ್ಲಿ ಸೆನ್ಸಾರ್‌ ಆಗಲಿದೆ. ಚಿತ್ರಮಂದಿರಗಳು ಸಹಜ ಸ್ಥಿತಿಗೆ ಬಂದ ನಂತರ ಚಿತ್ರ ಬಿಡುಗಡೆ
ಯಾಗಲಿ‌ದೆ’ ಎನ್ನುವುದು ನಿರ್ಮಾಪಕ ರಘುವರ್ಧನ್‌ ಮಾತು. ಮಾರಿಗೋಲ್ಡ್‌ ಅಂದಾಕ್ಷಣ, ಅದೊಂದು ಅಂಡರ್‌ವರ್ಲ್ಡ್ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಈ ಕುತೂಹಲಕ್ಕೆ ತೆರೆಮೇಲೆಯೇ ಉತ್ತರ ಸಿಗಲಿದೆ. ಈಚಿತ್ರಕ್ಕೆ ವೀರ್‌ ಸಮರ್ಥ್ ಅವರ ಸಂಗೀತವಿದ್ದು, ಯೋಗರಾಜ್‌ ಭಟ್‌ ಕವಿರಾಜ್‌ ಮತ್ತು ವಿಜಯ್‌ ಭರಮಸಾಗರ ಅವರು ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ:ಐಟಿ ಅಧಿಕಾರಿಗಳ ಆಗಮನ: ಮಳಿಗೆ ಬಂದ್‌ ಮಾಡಿ ನಾಪತ್ತೆ

ಕೆ.ಎಸ್‌.ಚಂದ್ರಶೇಖರ್‌ ಛಾಯಾಗ್ರಹಣ,ಕೆ.ಎಂ.ಪ್ರಕಾಶ್‌ ಸಂಕಲನವಿದೆ.ರಘ ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.ಅರ್ಜುನ್‌ ರಾಜ್‌ ಸಾಹಸ,ಕಲೈ ಅವರ ನೃತ್ಯ ನಿರ್ದೇಶನವಿದೆ.ಬೆಂಗಳೂರು,ಸಕಲೇಶಪುರದ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿದ್ದಾರೆ. ಉಳಿದಂತೆ ಸಂಪತ್‌ ಕುಮಾರ್‌,ಕಾಕ್ರೋಚ್‌ ಸುಧಿ,ಯಶ್‌ ಶೆಟ್ಟಿ,ವಜ್ರಾಂಗ್‌ ಶೆಟ್ಟಿ,ಬಲರಾಜ್ವಾಡಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next