Advertisement

Maravanthe: ಮನೆಗೆ ನುಗ್ಗಿ ನಗ-ನಗದು ಕಳವು: ಪ್ರಕರಣ ದಾಖಲು

12:22 AM Sep 21, 2023 | Team Udayavani |

ಗಂಗೊಳ್ಳಿ: ಮರವಂತೆಯ ಸಂತೋಷ ಶೆಟ್ಟಿ ಅವರ ಮನೆಯ ಬಾಗಿಲು ಒಡೆದು ಬೆಡ್‌ರೂಮಿನ ಕಬ್ಬಿಣದ ಗಾದ್ರೇಜ್‌ ಅನ್ನು ತೆರೆದು ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ, ನಗದು ಕಳವುಗೈಯಲಾಗಿದೆ.

Advertisement

8 ಗ್ರಾಂನ ಚಿನ್ನದ ಉಂಗುರ 2, 14 ಗ್ರಾಂನ ಚಿನ್ನದ ಬ್ರಾಸ್‌ಲೆಟ್‌ 1, ಒಟ್ಟು ಮೌಲ್ಯ 1.50 ಲಕ್ಷ ರೂ. ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನು, ಬೆಳ್ಳಿಯ ಕಾಲು ದೀಪ, ಬೆಳ್ಳಿಯ ಕುಂಕುಮದ ಕರಡಿಗೆ ಸೇರಿ ಒಟ್ಟು ಅಂದಾಜು ಮೌಲ್ಯ 50 ಸಾವಿರ ರೂ. ಹಾಗೂ ನಗದು 1.05 ಲಕ್ಷ ರೂ.ಗಳನ್ನು ಕಳವು ಮಾಡಲಾಗಿದೆ.

ಕಳುವಾದ ಸೊತ್ತಿನ ಒಟ್ಟು ಮೌಲ್ಯ 3.05 ಲಕ್ಷ ರೂ. ಆಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next