Advertisement

Kerala’s Wayanad; ಗುಂಡಿನ ಚಕಮಕಿ: ಇಬ್ಬರು ನಕ್ಸಲರ ಬಂಧನ

08:15 PM Nov 08, 2023 | Team Udayavani |

ವಯನಾಡ್‌:ಕೇರಳ ಪೊಲೀಸ್‌ ಇಲಾಖೆಯ ವಿಶೇಷ ತಂಡ ಮತ್ತು ನಕ್ಸಲೀಯರ ನಡುವೆ ಮಂಗಳವಾರ ತಡರಾತ್ರಿ ಗುಂಡಿನ ಚಕಮಕಿ ನಡೆದಿದೆ. ಬಳಿಕ ಚಂದ್ರು ಮತ್ತು ಉಣ್ಣಿ ಮಾಯಾ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಪೆರಿಯ ಸಮೀಪದ ತಳಪುಝ ಠಾಣಾ ವ್ಯಾಪ್ತಿಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ.

Advertisement

ಹೆಚ್ಚಿನ ವಿಚಾರಣೆಗಾಗಿ ಈ ಇಬ್ಬರನ್ನು ಸ್ಥಳೀಯ ಪೊಲೀಸ್‌ ಶಿಬಿರಕ್ಕೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್‌ ಫೋನ್‌ಗಳನ್ನು ಚಾರ್ಜ್‌ ಮಾಡಲು ಐವರು ನಕ್ಸಲರು ತಳಪುಝ ಪೊಲೀಸ್‌ ಠಾಣೆ ವ್ಯಾಪ್ತಿಯ ಒಂದು ಮನೆಯಲ್ಲಿ ಅಡಗಿದ್ದರು. ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ಪೊಲೀಸರ ವಿಶೇಷ ತಂಡ ದಾಳಿ ನಡೆಸಿತು. ಈ ವೇಳೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು. ತಂಡದಲ್ಲಿ ಒಟ್ಟು ಐವರು ನಕ್ಸಲೀಯರು ಇದ್ದರು ಎಂದು ಹೇಳಲಾಗಿದೆ.

ಗುಂಡಿನ ಚಕಮಕಿ ನಡೆಯುತ್ತಿದ್ದಂತೆಯೇ ಮೂವರು ಪರಾರಿಯಾಗಿ ಚಂದ್ರು ಮತ್ತು ಉಣ್ಣಿ ಮಾಯಾ ಎಂಬ ಇಬ್ಬರನ್ನು ಬಂಧಿಸಲಾಯಿತು. ಪರಾರಿಯಾಗಿರುವ ನಕ್ಸಲರಿಗಾಗಿ ಕಲ್ಲಿಕೋಟೆ ಜಿಲ್ಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next