Advertisement

ಮೋದಿ ಭೇಟಿ ವಿರೋಧಿಸಿ ಒಡಿಶಾದ ರೈಲು ನಿಲ್ದಾಣಕ್ಕೆ ನಕ್ಸಲರ ದಾಳಿ

08:50 AM Mar 31, 2017 | Team Udayavani |

ರಾಯಗಢ : ಜಿಲ್ಲೆಯ ದಹಿಸಲ್ಲು ಎಂಬಲ್ಲಿ ರೈಲು ನಿಲ್ದಾಣದ ಮೇಲೆ ನಕ್ಸಲರ ತಂಡ  ಶುಕ್ರವಾರ ನಸುಕಿನ 2 ಗಂಟೆಯ ವೇಳೆ  ದಾಳಿ ನಡೆಸಿದ್ದು ಕಂಟ್ರೋಲ್‌ ರೂಮ್‌ನಲ್ಲಿ  ಸ್ಫೋಟಕಗಳನ್ನು ಸಿಡಿಸಿದ್ದಾರೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಒಡಿಶಾ ಭೇಟಿಯನ್ನು ವಿರೋಧಿಸಿ 2 ವಾರಗಳ ಮುಂಚೆ ನಕ್ಸಲರು ಈ ಕೃತ್ಯ ಎಸಗಿದ್ದಾರೆ. 20 ಕ್ಕೂ ಹೆಚ್ಚು ನಕ್ಸಲರು ದಾಳಿ ನಡೆಸಿರುವ ತಂಡದಲ್ಲಿದ್ದರು ಎಂದು ವರದಿಯಾಗಿದೆ.

ಎಪ್ರಿಲ್‌ 15 ರಂದು ಪ್ರಧಾನಿ ಮೋದಿ ಅವರು ಭೇಟಿ ನೀಡಬಾರದು, ಈ ಬಗ್ಗೆ ಜನ ಪ್ರತಿಭಟಿಸಬೇಕು ಎಂಬ ನಕ್ಸಲ್‌ ಬರಹಗಳ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. 

ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next