Advertisement

ಹುಣಸೂರು: ಅನೇಕ ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

12:29 PM May 04, 2023 | Team Udayavani |

ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಮೋದೂರು ಪಿ. ಕೊಪ್ಪಲಿನಲ್ಲಿ ಕುರುಬ ಸಮಾಜದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.

Advertisement

ಮೋದೂರು ಪಿ.ಕೊಪ್ಪಲಿನಲ್ಲಿ ಮೇ.3ರ ಬುಧವಾರ ರಾತ್ರಿ ನಡೆದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖಂಡ ಹರವೆ ಶ್ರೀಧರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡವರಿಗೆ ಶಾಲು ಹಾಕಿ ಅಭಿನಂದಿಸಲಾಯಿತು.

ಗ್ರಾ.ಪಂ. ಸದಸ್ಯ ಹೇಮಂತ್, ಮುಖಂಡರಾದ ಶಿವಕುಮಾರ್, ಸಣ್ಣ ಸ್ವಾಮಿಗೌಡ, ರಾಜೇಗೌಡ, ಶಿವರಾಮೇಗೌಡ, ಮಹೇಶ್, ಲೋಕೇಶ್, ವಿಶ್ವಕರ್ಮ ಸಮಾಜದ ಮೂರ್ತಿ, ಕೃಷ್ಣಾಚಾರಿ ತಮ್ಮಣ್ಣಚಾರಿ ಸೇರಿದಂತೆ ಅನೇಕ ಯುವಕರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವಕ್ತಾರ ರಮೇಶ್ ಹಾಗೂ ಇತರರು ಹಾಜರಿದ್ದರು.

ಮೋದೂರು, ಮೋದೂರು ಎಂ.ಕೊಪ್ಪಲು, ಮೋದೂರು ಪಿ.ಕೊಪ್ಪಲು ಗ್ರಾಮದಲ್ಲಿ ಕುರುಬ ಸಮಾಜದವರೆ ಹೆಚ್ಚಿದ್ದು, ಗ್ರಾಮದ ಮುಖಂಡ ಪಿ.ಕೊಪ್ಪಲು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

Advertisement

ಬುಧವಾರ ಸಂಜೆಯಷ್ಟೆ ಗ್ರಾಮದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಚುನಾವಣಾ ಪ್ರಚಾರಕ್ಕಾಗಮಿಸಿದ್ದ ವೇಳೆ ಗ್ರಾಮಸ್ಥರು ಮಂಜುನಾಥರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದ್ದು, ರಾತ್ರಿ ಜೆಡಿಎಸ್ ಪಕ್ಷ ಸೇರಿ ಅಚ್ಚರಿ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next