Advertisement

ಹಲವರಿ ಮಠ ಯಡಮೊಗೆ: ಗುರುಪೂರ್ಣಿಮೆ

02:40 AM Jul 13, 2017 | Team Udayavani |

ತೆಕ್ಕಟ್ಟೆ: ಅಖೀಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ (ರಿ.), ಶ್ರೀ ಕ್ಷೇತ್ರ ಹಲವರಿ ಮಠ ಅಭಿವೃದ್ಧಿ ಸಮಿತಿ ಮತ್ತು ಕುಂದಾಪುರ ಜೋಗಿ ಸಮಾಜ ಸೇವಾ ಸಮಿತಿ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಜು. 9ರಂದು ಹಲವರಿ ಮಠ ಯಡಮೊಗೆ ಯಲ್ಲಿ ಪರಮಪೂಜ್ಯ ಯೋಗಿ ಪೀರ್‌ ಜಗದೀಶನಾಥ್‌ ಜೀ ಪೀಠಾಧೀಪತಿಗಳ ಗುರು ಪಾದಪೂಜೆ, ಗುರು Ó¾‌ƒತಿ, ಗುರುಗಳ ಆಶೀರ್ವಾದ ಪಡೆಯುವುದರ ಮೂಲಕ  ಗುರುಪೂರ್ಣಿಮೆಯನ್ನು ಆಚರಿಸಲಾಯಿತು. 

Advertisement

ಭಜನಾ, ಸಂಗೀತ ವಿದ್ವಾನ್‌ ಗುರುರಾಜ ಬೆಂಗಳೂರು ಹಾಗೂ ತಂಡದವರಿಂದ “ಗುರುಪರಂಪರೆ’ ಹರಿಕಥಾ ಕಾಲಕ್ಷೇಪ ನೆಡೆಯಿತು.

ಕಾರ್ಯಕ್ರಮದಲ್ಲಿ ಅಖೀಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ (ರಿ.) ರಾಜ್ಯಾಧ್ಯಕ್ಷ ಡಾ|| ಕೇಶವ ಕೋಟೇಶ್ವರ, ಶ್ರೀ ಕ್ಷೇತ್ರ ಹಲವರಿ ಮಠ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಬಳೆಗಾರ ಮತ್ತು ಕುಂದಾಪುರ ಜೋಗಿ ಸಮಾಜ ಸೇವಾ ಸಮಿತಿ (ರಿ.) ಅಧ್ಯಕ್ಷ ದಯಾನಂದ ಮರವಂತೆ, ಉಡುಪಿ ಜೋಗಿ ಸಮಾಜ ಸೇವಾ ಸಮಿತಿ (ರಿ.) ಇದರ ಸದಸ್ಯರು ಹಾಗೂ ಜೋಗಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next