Advertisement

ಮಹಾರಾಷ್ಟ : ಕಾಂಗ್ರೆಸ್‌, ಎನ್‌ಸಿಪಿ 25 ಶಾಸಕರು ಬಿಜೆಪಿ ಸಂಪರ್ಕದಲ್ಲಿ ?

04:42 PM Jun 09, 2019 | Sathish malya |

ಮುಂಬಯಿ : ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಯ ಕನಿಷ್ಠ 25 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಹೇಳಿದ್ದಾರೆ.

Advertisement

ಈ ವರ್ಷ ಸೆಪ್ಟಂಬರ್‌ – ಅಕ್ಟೋಬರ್‌ ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದಕ್ಕೆ ಮುನ್ನ ವಿರೋಧ ಪಕ್ಷಕ್ಕೆ ಬಂಡಾಯದ ಬಲು ದೊಡ್ಡ ಆಘಾತ ಆಗಲಿಕ್ಕಿದೆ ಎಂದವರು ಹೇಳಿದರು.

ನಾಶಿಕ್‌ ಉಸ್ತುವಾರಿ ಸಚಿವರಾಗಿರುವ ಮಹಾಜನ್‌ ಅವರಿಗೆ ಇಂದು ಶುಕ್ರವಾರ ಜಳಗಾಂವ್‌ ಜಿಲ್ಲಾ ಉಸ್ತುವಾರಿ ಸಚಿವ ಪದವನ್ನೂ ಹೆಚ್ಚುವರಿಯಾಗಿ ನೀಡಲಾಗಿದೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಒಟ್ಟಾಗಿ 50 ಸ್ಥಾನಗಳನ್ನು ಕೂಡ ಗೆಲ್ಲುವುದಿಲ್ಲ ಎಂದು ಸಿಎಂ ಫ‌ಡ್ನವೀಸ್‌ ಗೆ ನಿಕಟರಾಗಿರುವ ಮಹಾಜನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next