Advertisement

ಇನ್ನು ಎರಡೇ ದಿನದಲ್ಲಿ ಮಹಾರಾಷ್ಟ್ರಕ್ಕೆ ಮುಂಗಾರು ಪ್ರವೇಶ : ಹವಾಮಾನ ಇಲಾಖೆ

11:19 PM Jun 09, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮುಂಗಾರು ಮಾರುತವು ನಿಧಾನವಾಗಿ ಚುರುಕುಗೊಳ್ಳುತ್ತಿದ್ದು, ಇನ್ನೆರಡು ದಿನಗಳಲ್ಲೇ ಮಹಾರಾಷ್ಟ್ರವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

ಜೂ.10-11ರಂದು ಅರುಣಾ ಚಲ ಪ್ರದೇಶದಲ್ಲಿ, ಮುಂದಿನ 5 ದಿನಗಳ ಕಾಲ ಮೇಘಾಲಯದಲ್ಲಿ ಧಾರಾಕಾರ ಮಳೆಯಾಗಲಿದೆ ಎಂಬ ಮುನ್ನೆಚ್ಚರಿಕೆ ಯನ್ನೂ ಇಲಾಖೆ ನೀಡಿದೆ.

ಈ ನಡುವೆ ದಿಲ್ಲಿ-ಎನ್‌ಸಿಆರ್‌ ಮತ್ತು ವಾಯವ್ಯ ಭಾರತದ ಇತರ ಭಾಗಗಳಲ್ಲಿ ಜೂ.15ರ ವರೆಗೂ ಬಿಸಿಲಿನ ಝಳ ಮುಂದುವರಿಯುತ್ತದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next