Advertisement

Joram; ಕನ್ನಡದ ಸಾಕಷ್ಟು ಸಿನಿಮಾಗಳು ನನ್ನನ್ನು ತುಂಬ ಕಾಡಿದೆ: ಮನೋಜ್ ಬಾಜಪಾಯಿ

12:08 PM Dec 08, 2023 | Team Udayavani |

“ಕನ್ನಡ ಚಿತ್ರರಂಗ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಕನ್ನಡದಲ್ಲಿ “ಗರುಡ ಗಮನ ವೃಷಭ ವಾಹನ’, “ಕಾಂತಾರ’ ಮೊದಲಾದ ಸಿನಿಮಾಗಳನ್ನು ನೋಡಿದ್ದೇನೆ. ಕನ್ನಡದ ಸಾಕಷ್ಟು ಸಿನಿಮಾಗಳು ನನ್ನನ್ನು ತುಂಬ ಕಾಡಿದೆ. ಇಂಥ ಅನೇಕ ಸಿನಿಮಾಗಳು ನನಗೆ ಧೈರ್ಯ, ಸ್ಪೂರ್ತಿ ತುಂಬುತ್ತದೆ’ ಇದು ಕನ್ನಡ ಚಿತ್ರರಂಗದ ಬಗ್ಗೆ ಬಾಲಿವುಡ್‌ ನಟ ಮನೋಜ್ ಬಾಜಪಾಯಿ ಮಾತು.

Advertisement

ತಮ್ಮ “ಜೋರಾಮ್ ಸಿನಿಮಾದ ಪ್ರಚಾರದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಮನೋಜ್‌ ಬಾಜಪಾಯಿ ಕನ್ನಡ ಚಿತ್ರರಂಗದ ಬಗ್ಗೆ ಸಾಕಷ್ಟು ನಿರೀಕ್ಷೆ ಮತ್ತು ಪ್ರಶಂಸೆಯ ಮಾತುಗಳನ್ನಾಡಿದರು.

“”ಜೋರಾಮ್‌’ ಸಿನಿಮಾದಲ್ಲಿ ಆದಿವಾಸಿ ಜನರ ಕಥೆಯಿದೆ. ಭೂಮಿ ಕಸಿದುಕೊಳ್ಳುವ ಅನೈತಿಕತೆ, ರಾಜಕೀಯ, ಅಪರಾಧ ಮತ್ತು ದುಃಖದ ಆಳವಾದ ಪ್ರಜ್ಞೆಯನ್ನು ಸಿನಿಮಾದಲ್ಲಿದೆ. ವ್ಯವಸ್ಥೆಯ ದಬ್ಟಾಳಿಕೆ ವಿರುದ್ದದ ಹೋರಾಟ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದರು ಮನೋಜ್‌.

ದೇವಶಿಷ್‌ ಮಖೀಜಾ ನಿರ್ದೇಶನದ “ಜೋರಾಮ್‌’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next