Advertisement

Manipur: ಸ್ನೈಪರ್‌ಗಳಿಂದ ಹಿರಿಯ ಪೊಲೀಸ್‌ ಅಧಿಕಾರಿ ಹತ್ಯೆ

09:05 PM Oct 31, 2023 | Team Udayavani |

ಇಂಫಾಲ/ನವದೆಹಲಿ: ಈಶಾನ್ಯ ಮಣಿಪುರದಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ರಾಜ್ಯ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಮಯೆನ್ಮಾರ್‌ ಗಡಿ ಸಮೀಪ ಇರುವ ಬಿಎಸ್‌ಎಫ್ನ ಹೆಲಿಪ್ಯಾಡ್‌ ಸಮೀಪ ಈ ಘಟನೆ ನಡೆದಿದೆ. ಉಪ ವಿಭಾಗಾಧಿಕಾರಿ ಮಟ್ಟ (ಎಸ್‌ಡಿಪಿಒ) ಪೊಲೀಸ್‌ ಅಧಿಕಾರಿ ಚಿಂಗ್‌ತಾಮ್‌ ಆನಂದ್‌ ಎಂಬುವರನ್ನು ಸ್ನೆ„ಪರ್‌ಗಳು (ದೂರದ ಸ್ಥಳದಿಂದ ಗುರಿ ಇಟ್ಟು ಗುಂಡು ಹಾರಿಸುವವರು ) ಕೊಂದಿದ್ದಾರೆ.

Advertisement

ಮಯೆನ್ಮಾರ್‌ಗೆ ಹೊಂದಿಕೊಂಡಿರುವ ಮಣಿಪುರದ ಮೊರೆ ಎಂಬಲ್ಲಿ ಈ ಘಟನೆ ನಡೆದಿದೆ. ಹೊಸತಾಗಿ ನಿರ್ಮಾಣವಾಗಿರುವ ಹೆಲಿಪ್ಯಾಡ್‌ ಅನ್ನು ಪರೀಕ್ಷಿಸುತ್ತಿರುವ ಸಂದರ್ಭದಲ್ಲಿ ಗುಂಡು ಹಾರಾಟದ ಘಟನೆ ನಡೆದಿದೆ. ಮೊರೆ ಎಂಬ ಪಟ್ಟಣದಿಂದ ಮಣಿಪುರ ರಾಜ್ಯ ಪೊಲೀಸ್‌ ಅಧಿಕಾರಿಗಳನ್ನು ಹೊರ ಕಳುಹಿಸಬೇಕು ಎಂಬ ಬೇಡಿಕೆಯ ನಡುವೆಯೇ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇಂಫಾಲದಲ್ಲಿ ಸಿಎಂ ಎನ್‌.ಬೀರೇನ್‌ ಸಿಂಗ್‌ ನೇತೃತ್ವದಲ್ಲಿ ಸಭೆ ನಡೆದು, ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಲಾಯಿತು.

ಮೇನಿಂದ ನಡೆಯುತ್ತಿರುವ ಹಿಂಸಾಕೃತ್ಯಗಳಲ್ಲಿ ಕನಿಷ್ಠ 180 ಮಂದಿ ಅಸುನೀಗಿ, 60 ಸಾವಿರಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next