Advertisement

Manipal ಮಾನಸಿಕ ಖಿನ್ನತೆ: ಬ್ಯಾಂಕ್‌ ಮಹಿಳಾ ಅಧಿಕಾರಿ ಆತ್ಮಹತ್ಯೆ

10:03 PM Sep 15, 2023 | Team Udayavani |

ಮಣಿಪಾಲ: ಮಾನಸಿಕ ಖಿನ್ನತೆಯಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಮಹಾರಾಷ್ಟ್ರದ ನಾಗಪುರದ ನಿವಾಸಿ ಸೋನಾಲಿ (35) ಆತ್ಮಹತ್ಯೆ ಮಾಡಿಕೊಂಡವರು. ಅವರು ಮಣಿಪಾಲದ ಕೆನರಾ ಬ್ಯಾಂಕ್‌ ಮುಖ್ಯ ಕಚೇರಿಯಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದರು. 2 ವರ್ಷಗಳಿಂದ ಮಣಿಪಾಲದ ವಿಬುಧಪ್ರಿಯ ನಗರದಲ್ಲಿರುವ ಪ್ರೀಮಿಯರ್‌ ರೆಸಿಡೆನ್ಸ್‌ನಲ್ಲಿ ವಾಸಮಾಡಿಕೊಂಡಿದ್ದರು.

2019ರಲ್ಲಿ ಅಮೋಲ್‌ ಅವರೊಂದಿಗೆ ಮದುವೆಯಾಗಿ 2022ರಲ್ಲಿ ವೈಯಕ್ತಿಕ ಕಾರಣಗಳಿಂದ ವಿಚ್ಛೇದನವಾಗಿತ್ತು. ಆ ಬಳಿಕ ಅವರು ಸ್ವಲ್ಪ ಖಿನ್ನತೆಗೆ ಒಳಗಾಗಿದ್ದರು.

ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಳೇ ವಾಸವಾಗಿದ್ದು, ಅವರ ತಂದೆ ನರೇಂದ್ರ ವಿಸ್ತಾರಿ ನಂದೇಶ್ವರ ಹಾಗೂ ಅವರ ಪತ್ನಿ ಆಗಾಗ ಬಂದು ಹೋಗುತ್ತಿದ್ದರು.

ಆ. 27ರಂದು ಅವರ ತಾಯಿ ಶೋಭಾ ಅವರು ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು ಅವರ ಕಾಲಿಗೆ ಪೆಟ್ಟಾಗಿತ್ತು. ಅವರನ್ನು ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದ್ದು, ಸೋನಾಲಿ ಊಟ, ತಿಂಡಿ ತಂದು ಕೊಡುತ್ತಿದ್ದರು. ಸೆ. 14ರಂದು ಡಿಸಾcರ್ಜ್‌ ಇತ್ತು. ಸೆ. 13ರ ರಾತ್ರಿ ಆಕೆ ತಂದೆಯೊಂದಿಗೆ ಆಸ್ಪತ್ರೆಯಲ್ಲಿಯೇ ಇದ್ದು, ಬೆಳಗ್ಗೆ ಮನೆಗೆ ಹಿಂದಿರುಗಿದ್ದಳು. ಬಳಿಕ ಸಂಜೆಯಾದರೂ ಆಸ್ಪತ್ರೆಗೆ ಬಾರದಿದ್ದಾಗ ತಂದೆ ಕರೆ ಮಾಡಿದಾಗ ಮೊಬೈಲ್‌ ಕರೆ ಸ್ವೀಕರಿಸಿರಲಿಲ್ಲ. ರಾತ್ರಿ 8 ಗಂಟೆಗೆ ಮನೆಗೆ ಬಂದು ನೋಡಿದಾಗ ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದ್ದು, ಬಳಿಕ ಬಾಗಿಲು ತೆರೆದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

Advertisement

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next