Advertisement

ಕಾರ್ಮಿಕರಿಂದ ಮ್ಯಾನ್‌ಹೋಲ್‌ ಸ್ವಚ್ಚತಾ ಕಾರ್ಯ: ಪ್ರಕರಣ ದಾಖಲು  

09:40 AM Oct 23, 2017 | Team Udayavani |

ಮಂಗಳೂರು: ನಗರದ ಬಂದರ್‌ನ ನೆಲ್ಲಿಕಾಯಿ ರಸ್ತೆಯ ಒಳ ಚರಂಡಿ ವ್ಯವಸ್ಥೆಯ ಮ್ಯಾನ್‌ಹೋಲ್‌ನಲ್ಲಿ ಕಳೆದ ಬುಧವಾರ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಿದ ಬಗ್ಗೆ ಪಾಲಿಕೆಯ ಗುತ್ತಿಗೆದಾರರು ಮತ್ತು ಎಂಜಿನಿಯರ್‌ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಐಟಿಯು ಸಂಘಟನೆಯ ಯೋಗೀಶ್‌ ಜಪ್ಪಿನಮೊಗರು ಅವರು ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

Advertisement

ಕಾರ್ಮಿಕರನ್ನು ಒಳ ಚರಂಡಿ ಗುಂಡಿಗೆ ಇಳಿಸ ಬಾರದು ಎಂಬ ನಿಯಮ ಇದ್ದರೂ ಕಾನೂನು ಉಲ್ಲಂಘಿಸಿ ಒಳ ಚರಂಡಿಯ ಬ್ಲಾಕ್‌ ಸರಿ ಪಡಿಸಲು ದಲಿತ ಸಮುದಾಯದ ಕಾರ್ಮಿಕರನ್ನು ಯಾವುದೇ ಸುರಕ್ಷಾ  ಸೌಕರ್ಯಗಳನ್ನು ಒದಗಿಸದೆ ಮ್ಯಾನ್‌ಹೋಲ್‌ಗೆ ಇಳಿಸಿ ಕೆಲಸ ಮಾಡಿಸಲಾಗಿದೆ. ಎಂದವರು ದೂರಿನಲ್ಲಿಐ ತಿಳಿಸಿದ್ದಾರೆ. 

ಈ ಬಗ್ಗೆ ಗುತ್ತಿಗೆದಾರ ನಜೀರ್‌ ಮತ್ತು ಮಹಾನಗರ ಪಾಲಿಕೆಯ ಎಂಜಿನಿಯರ್‌ ಹಾಗೂ ಪಾಲಿಕೆಯ ಇತರ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರಗಿಸ ಬೇಕು ಎಂದು ಯೋಗೀಶ್‌ ಜಪ್ಪಿನಮೊಗರು ಅವರು  ದೂರಿನಲ್ಲಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next