Advertisement

ನೆಲ್ಯಾಡಿ: ಮಂಗಳೂರು ವಿ.ವಿ. ಘಟಕ ಕಾಲೇಜು ಅನುಷ್ಠಾನ ಸಮಿತಿ ಸಭೆ

05:35 AM May 25, 2018 | Team Udayavani |

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ತೊಟ್ಟಿಲಗುಂಡಿ ಎಂಬಲ್ಲಿ ಆರಂಭಗೊಳ್ಳಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿನ ಅನುಷ್ಠಾನ ಸಮಿತಿ ಸಭೆ ನೆಲ್ಯಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಘಟಕ ಕಾಲೇಜು ಅನುಷ್ಠಾನ ಸಮಿತಿ ಅಧ್ಯಕ್ಷೆ, ತಾ.ಪಂ. ಸದಸ್ಯೆ ಉಷಾ ಅಂಚನ್‌ ಅಧ್ಯಕ್ಷತೆ ವಹಿಸಿದ್ದರು.

Advertisement

2018-19ನೇ ಶೈಕ್ಷಣಿಕ ವರ್ಷದಿಂದಲೇ ನೆಲ್ಯಾಡಿಯಲ್ಲಿ ಘಟಕ ಕಾಲೇಜು ಕಾರ್ಯಾರಂಭ ಮಾಡಲಿದ್ದು ಪ್ರಥಮ ವರ್ಷ ಬಿ.ಎ., ಬಿ.ಕಾಂ. ಹಾಗೂ ಬಿ.ಬಿ.ಎಂ. ತರಗತಿಗಳು ನಡೆಯಲಿವೆ. ಮೇ 25ರಂದು ಅಪರಾಹ್ನ 2.30ಕ್ಕೆ ದಾಖಲಾತಿ ಪ್ರಾರಂಭಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವಿವಿ ಘಟಕಕ್ಕೆ ಸರಕಾರ ಮಂಜೂರುಗೊಳಿಸಿದ ತೊಟ್ಟಿಲಗುಂಡಿಯಲ್ಲಿನ 27 ಎಕ್ರೆ ಜಾಗದಲ್ಲಿ ಕಟ್ಟಡ ನಿರ್ಮಾಣಗೊಳ್ಳಬೇಕಾಗಿದೆ. ಪ್ರಸ್ತುತ ವರ್ಷ ನೂತನ ತರಗತಿಗಳನ್ನು ನೆಲ್ಯಾಡಿ ಸಂತ ಜಾರ್ಜ್‌ ವಿದ್ಯಾಸಂಸ್ಥೆಯಲ್ಲಿ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಅವರ ಹೆತ್ತವರೊಂದಿಗೆ ಮೇ 25ರಂದು ಅಪರಾಹ್ನ 2 ಗಂಟೆಗೆ ಸಂತ ಜಾರ್ಜ್‌ ವಿದ್ಯಾಸಂಸ್ಥೆಯಲ್ಲಿ ಉಪಸ್ಥಿತರಿರುವಂತೆ ಕೋರಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌, ನೆಲ್ಯಾಡಿ ಸಂತ ಜಾರ್ಜ್‌ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌, ನಿವೃತ್ತ ಮುಖ್ಯಗುರು ರವೀಂದ್ರ ಟಿ., ನೆಲ್ಯಾಡಿ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ಗ್ರಾ.ಪಂ. ಸದಸ್ಯರಾದ ಅಬ್ರಹಾಂ ಕೆ.ಪಿ., ತೀರ್ಥೇಶ್ವರ ಉರ್ಮಾನು, ಫ್ಲೋರಿನಾ ಡಿ’ಸೋಜಾ, ಪ್ರಮುಖರಾದ ಹನೀಫ್ ಸಿಟಿ, ಶಿವರಾಮ ಮಕ್ಕಿಗದ್ದೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಗಂಗಾಧರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next