Advertisement

Mangaluru ಅಲ್ಪಾವಧಿ ಬೆಳೆ ಸಾಲದ ಮಿತಿ ವಿಸ್ತರಣೆ

11:21 PM Sep 15, 2023 | Team Udayavani |

ಮಂಗಳೂರು: ಕೊನೆಗೂ ಶೂನ್ಯ ಬಡ್ಡಿದರದ ಅಲ್ಪಾವಧಿ ಬೆಳೆ ಸಾಲ ಹಾಗೂ ಶೇ. 3 ಬಡ್ಡಿದರದ ಮಧ್ಯಮಾವಧಿ/ದೀರ್ಘಾವಧಿ ಸಾಲದ ಮಿತಿಯನ್ನು ಅನುಕ್ರಮವಾಗಿ 3ರಿಂದ 5 ಲಕ್ಷ ರೂ.ಗೆ ಹಾಗೂ 10ರಿಂದ 15 ಲಕ್ಷ ರೂ.ಗೆ ಸರಕಾರ ವಿಸ್ತರಣೆ ಮಾಡಿದೆ.

Advertisement

ಈ ಮೂಲಕ ಲಕ್ಷಾಂತರ ಕೃಷಿಕರಿಗೆ ಹಾಲಿ ಕೃಷಿ ಋತುವಿನಲ್ಲಿಯೇ ಕೃಷಿ ವಿಸ್ತರಣೆ, ಯಾಂತ್ರೀಕರಣ ಮತ್ತಿತರ ಅಗತ್ಯಗಳಿಗಾಗಿ ನೆರವು ದೊರಕಿದಂತಾಗಿದೆ.

ಈ ಶೂನ್ಯ ಬಡ್ಡಿದರದ ಸಾಲವಂತೂ ಕರಾವಳಿಯಲ್ಲಿ ಬಹುತೇಕ ಕೃಷಿಕರಿಗೆ ನೆರವಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿತ್ತು. 1-4-2023ರಿಂದ 31-03-2024 ರ ಸಾಲಿನಲ್ಲಿ ಸಾಲ ಪಡೆದವರಿಗೆ ಮಾತ್ರ ಈ ಬಡ್ಡಿದರಗಳು ಅನ್ವಯವಾಗುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಈ ಸಾಲದ ಮಿತಿ ವಿಸ್ತರಣೆ ಇದುವರೆಗೆ ಅನುಷ್ಠಾನಗೊಳ್ಳದಿರುವ ಬಗ್ಗೆ ಉದಯವಾಣಿ ಸೆ.10ರಂದು ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next