Advertisement

Mangaluru ನಿಷೇಧಿತ ಮಾದಕ ವಸ್ತು ಎಂಡಿಎಂಎ ಸೇವನೆ, ಸಾಗಾಟ; ಓರ್ವನ ಬಂಧನ

11:19 PM Sep 04, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಸೇವಿಸುವ ಜತೆ ಸಾಗಾಟ ಮಾಡುತ್ತಿದ್ದ ಓರ್ವನನ್ನು 2.60 ಗ್ರಾಂ ಎಂಡಿಎಂಎ ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಅಶೋಕನಗರದ ಕೋಡಿಕ್ಕಲ್‌ 2ನೇ ಕ್ರಾಸ್‌, ವಿವೇಕಾನಂದ ನಗರದ ಶಂಕರ ನಿಲಯ ನಿವಾಸಿ ಹಿಮಾನಿಷ್‌ (27) ಬಂಧಿತ ಆರೋಪಿ.

ಕಂಕನಾಡಿ ನಗರ ಠಾಣಾ ಪಿಎಸ್‌ಐ ಶಿವಕುಮಾರ್‌ ಹಾಗೂ ತಂಡ ಪಡೀಲ್‌ ಚೆಕ್‌ಪೋಸ್ಟ್‌ ಬಳಿ ಮಂಗಳವಾರ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕಾರು ಚಾಲಕ ಆರೋಪಿ ಮಾದಕ ದ್ರವ್ಯ ಸೇವಿಸಿರುವುದು ತಿಳಿದುಬಂದಿತ್ತು. ಕಾರನ್ನು ಪರಿಶೀಲನೆ ನಡೆಸಿದ ವೇಳೆ ಮಾದಕ ವಸ್ತು ಪತ್ತೆಯಾಗಿದ್ದು, ಸುಮಾರು 2.60 ಗ್ರಾಂ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್‌, ದಿನೇಶ್‌ ಕುಮಾರ್‌ ನಿರ್ದೇಶನದಂತೆ ಎಸಿಪಿ ಧನ್ಯಾ ನಾಯಕ್‌ ನೇತೃತ್ವದಲ್ಲಿ ಕಂಕನಾಡಿ ನಗರ ಠಾಣಾ ನಿರೀಕ್ಷಕ ಟಿ.ಡಿ. ನಾಗರಾಜ್‌ ಸಾರಥ್ಯದಲ್ಲಿ ಮಾರ್ಗದರ್ಶನದಂತೆ ಪಿಎಸ್‌ಐಗಳಾದ ಶಿವಕುಮಾರ್‌, ಯೋಗೀಶ್ವರನ್‌, ಎಎಸ್‌ಐ ಅಶೋಕ್‌, ಸಿಬಂದಿಗಳಾದ ಜಯಾನಂದ್‌, ರಾಘವೇಂದ್ರ, ರಾಜೇಸಾಬ್‌ ಮುಲ್ಲಾ ಮತ್ತು ಗಂಗಾಧರ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next