Advertisement

ಮಂಗಳೂರು ವಿ.ವಿ. ಸಿಂಡಿಕೇಟ್‌: ಸದಸ್ಯರ ನಾಮನಿರ್ದೇಶನ

12:50 AM Jan 05, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ಗೆ ನೂತನ ಸದಸ್ಯರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಬಂಟ್ವಾಳ ತಾಲೂಕು ನಾವೂರಿನ ನಿವಾಸಿ ವಕೀಲ ಮತ್ತು ನೋಟರಿ ಸುರೇಶ್‌ ಕುಮಾರ್‌ ಬಿ. ನಾವೂರು (ಮೀಸಲಾತಿ ಪ್ರವರ್ಗ- ಸಾಮಾನ್ಯ), ಮಂಗಳೂರಿನ ಲೆಕ್ಕಪರಿಶೋಧಕ ನಿತಿನ್‌ ಚ. ಶೆಟ್ಟಿ (ಸಾಮಾನ್ಯ), ಕುಂದಾಪುರ ತಾಲೂಕು ತಲ್ಲೂರಿನ ಜೂಡಿತ್‌ ಮೆಂಡೋನ್ಸ (ಮಹಿಳೆ), ಮಂಗಳೂರಿನ ರಘುರಾಜ್‌ ಕದ್ರಿ (ಪರಿಶಿಷ್ಟ ಜಾತಿ), ಕೊಣಾಜೆಯ ಅಚ್ಯುತ ಗಟ್ಟಿ (ಹಿಂದುಳಿದ ವರ್ಗ) ಮತ್ತು ಸುಳ್ಯದ ಸವಾದ್‌ ಸುಳ್ಯ (ಅಲ್ಪಸಂಖ್ಯಾಕ) ನಾಮನಿರ್ದೇಶನಗೊಂಡವರು.

ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ದ ಪ್ರಕರಣ 28(1)(ಜಿ)ರಡಿ ಪ್ರದತ್ತವಾದ ಅಧಿಕಾರದನ್ವಯ ಮತ್ತು ಪ್ರಕರಣ 38-39ರ ಉಪನಿಬಂಧನೆಗೊಳಪಟ್ಟು ಆಡಳಿತಾತ್ಮಕ ಹಿತದೃಷ್ಟಿಯಿಂದ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷ ಅಥವಾ ಮುಂದಿನ ಆದೇಶದ ವರೆಗೆ ನಾಮನಿರ್ದೇಶನ ಮಾಡಿ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾನಿಲಯಗಳು-2)ಯ ಸರಕಾರದ ಅಧೀನ ಕಾರ್ಯದರ್ಶಿಯವರು ಈ ಅಧಿಸೂಚನೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next