Advertisement

ಕೇರಳ ದೂರಿನ ಬೆನ್ನಲ್ಲೇ ಮಂಗಳೂರು- ಕಾಸರಗೋಡು ಹೆದ್ದಾರಿ ಓಪನ್: ವರದಿ

09:27 AM Mar 29, 2020 | keerthan |

ಬೆಂಗಳೂರು: ರಾಜ್ಯಕ್ಕೆ ಅಗತ್ಯ ಸಾಮಾಗ್ರಿ ತಲುಪಿಸುವ ಹೆದ್ದಾರಿಯನ್ನು ಕರ್ನಾಟಕ ಮುಚ್ಚಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರಕಾರಕ್ಕೆ ದೂರಿದ ಬೆನ್ನಲ್ಲೇ ಮಂಗಳೂರು- ಕಾಸರಗೋಡು ಸೇರಿದಂತೆ ಮೂರು ಹೆದ್ದಾರಿಗಳನ್ನು ತೆರೆಯಲು ಕರ್ನಾಟಕ ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.

Advertisement

ಕೇಂದ್ರ ಸಚಿವ ಸದಾನಂದ ಗೌಡ ಅವರು ಕೇರಳ ಮತ್ತು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ವರದಿಯಾಗಿದೆ. ಇದರಂತೆ ಮಂಗಳೂರು- ಕಾಸರಗೋಡು, ಮೈಸೂರು- ಹೆಚ್ ಡಿ ಕೋಟೆ ಮತ್ತು ಗುಂಡ್ಲುಪೇಟೆ ಮುತಂಗಾ ಹೆದ್ದಾರಿಗಳನ್ನು ತೆರೆಯಲಾಗುವುದು ಎಂದು ವರದಿಯಾಗಿದೆ.

ಕೊಡಗು- ತಲಶೇರಿ ಹೆದ್ದಾರಿಯನ್ನು ಕರ್ನಾಟಕ ಮುಚ್ಚಿತ್ತು. ಇದರಿಂದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರಕಾರಕ್ಕೆ ದೂರಿ ಪತ್ರ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next