Advertisement

Mangaluru ಜ. 28ರಂದು ಉತ್ತರ್-ದಕ್ಷಿಣ್ ಸಂಗೀತ ಕಾರ್ಯಕ್ರಮ

11:50 PM Jan 24, 2024 | Team Udayavani |

ಮಂಗಳೂರು: ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಸರಣಿ ಸಂಗೀತ ಕಾರ್ಯಕ್ರಮ “ಉತ್ತರ್‌-ದಕ್ಷಿಣ್‌’ ಜ. 28ರಂದು ಸಂಜೆ 5.30ರಿಂದ ನಡೆಯಲಿದೆ.

Advertisement

ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಮುಂಬಯಿಯ ವಿವಿಧ್‌ ಆರ್ಟ್ಸ್ ಆ್ಯಂಡ್‌ ಎಂಟರ್‌ಟೈನ್‌ಮೆಂಟ್‌ ಪ್ರಸ್ತುತ ಪಡಿಸುತ್ತಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್‌. ನಾಯಕ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿದ್ವಾನ್‌ ಮೈಸೂರು ನಾಗರಾಜ್‌ ಮತ್ತು ಡಾ| ಎಂ. ಮಂಜುನಾಥ್‌ ಅವರ ಪಿಟೀಲು ಯುಗಳ ವಿಶಿಷ್ಟ ಸಂಯೋಜನೆಯಾಗಿದ್ದು, ವಿದ್ವಾನ್‌ ಅರ್ಜುನ್‌ ಕುಮಾರ್‌ ಮತ್ತು ವಿದ್ವಾನ್‌ ಗಿರಿಧರ್‌ ಉಡುಪ ಅವರ ಮೃದಂಗ ಮತ್ತು ಘಟಂನಲ್ಲಿ ಸಾಥ್‌ ನೀಡಲಿದ್ದಾರೆ. ಬಳಿಕ ಪದ್ಮಶ್ರೀ ಪುರಸ್ಕೃತ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ. ಅವರಿಗೆ ನರೇಂದ್ರ ಎಲ್‌. ನಾಯಕ್‌ ಹಾರ್ಮೋನಿಯಂನಲ್ಲಿ ಮತ್ತು ಕೇಶವ್‌ ಜೋಶಿ ತಬಲಾದಲ್ಲಿ ಸಾಥ್‌ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next