Advertisement

Janmashtamiಗೆ 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ: ಮಂಗಳೂರು ಮೂಲದ ವೈದ್ಯರ ಟ್ವೀಟ್‌ ವೈರಲ್

02:59 PM Sep 07, 2023 | Team Udayavani |

ಮಂಗಳೂರು: ಇಂದು ಎಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಮನೆ ಮನಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Advertisement

ಹುಲಿ ವೇಷಧಾರಿಗಳು ತಾಸೆಯ ಸದ್ದಿಗೆ ಕುಣಿದು ಕುಪ್ಪಳಿಸುತ್ತಿವೆ. ವಿವಿಧ ವೇಷಧಾರಿಗಳು ವಿಟ್ಲಪಿಂಡಿಯ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಮನೆಗಳಲ್ಲಿ ಹಬ್ಬದ ವಿಶೇಷ ತಿಂಡಿ – ತಿನಿಸುಗಳು ಸಿದ್ದವಾಗಿದ್ದು, ಅದನ್ನು ಸೇವಿಸಿ ಜನ ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.

‌ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್(ಹೃದ್ರೋಗ ತಜ್ಞ) ಆಗಿರುವ ಡಾ. ಪದ್ಮನಾಭ್ ಕಾಮತ್ ಅವರು ಜನ್ಮಾಷ್ಟಮಿಯ ದಿನ ತಮ್ಮ ರೋಗಿಯೊಬ್ಬರು ತಯಾರಿಸಿದ ತಿಂಡಿ – ತಿನಿಸಿನ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ 88 ಖಾದ್ಯಗಳನ್ನು ಬಡಿಸಿದವರ ಫೋಟೋವನ್ನು ಟ್ವಿಟರ್‌ ನಲ್ಲಿ ಡಾ.ಕಾಮತ್‌ ಹಂಚಿಕೊಂಡಿದ್ದಾರೆ.

“ಅವರ ಮತ್ತು ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರ ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವವರು(ರೋಗಿ) ಅವರು ಈ ಹಿಂದಿನ ಅವರ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆ ಅವರು ನಿನ್ನೆ ರಾತ್ರಿ(ಸೆ.6, ಬುಧವಾರ) 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ” ಎಂದು ಫೋಟೋವನ್ನು ಹಾಕಿ ಡಾ.ಕಾಮತ್‌ ಬರೆದುಕೊಂಡಿದ್ದಾರೆ.

Advertisement

ಸದ್ಯ ಈ ಟ್ವೀಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  ಅವರದು ಎಂತಹ ಭಕ್ತಿ ಅವರ ಪಾದವನ್ನು ಸ್ಪರ್ಶಿಸಬೇಕೆಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ಅದ್ಭುತ..ಭಕ್ತರು ತಲುಪುವ ಸ್ಥಳಕ್ಕೆ ಯಾರೂ ತಲುಪಲು ಸಾಧ್ಯವಿಲ್ಲ.. ದೇವರಿಗೂ ಸಾಧ್ಯವಿಲ್ಲ. ಹರೇ ಕೃಷ್ಣ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next