Advertisement

ಮಂಗಳೂರು: ಕ್ರಿಸ್ಮಸ್‌ ಸಂಭ್ರಮಾಚರಣೆಗೆ ಚಾಲನೆ

12:29 AM Dec 24, 2022 | Team Udayavani |

ಮಂಗಳೂರು: ಕ್ರಿಸ್ಮಸ್‌ ಸಂಭ್ರ ಮಾಚರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರು ನಗರವೂ ಸಜ್ಜಾಗುತ್ತಿದೆ. ಶುಕ್ರವಾರ ನಗರದಲ್ಲಿರುವ ಬಿಷಪ್‌ ಹೌಸ್‌ನಲ್ಲಿ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾಕೇಕ್‌ ಕತ್ತರಿಸುವ ಮೂಲಕ ಸಂಭ್ರಮಾಚರಣೆಗೆ ಚಾಲನೆ ನೀಡಿದರು.

Advertisement

ಬಿಷಪ್‌ ಅವರು ತಮ್ಮ ಸಂದೇಶದಲ್ಲಿ, ಈಗ ಮತ್ತೆ ಕೊರೊನಾ ಹರಡುತ್ತಿರುವ ಕಾರಣ ಸರಕಾರದ ನಿಯಮಗಳ ಪಾಲನೆಯೊಂದಿಗೆ ಹಬ್ಬವನ್ನು ಆಚರಿಸೋಣ ಎಂದರು.

ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ| ಜೆ.ಬಿ. ಸಲ್ದಾನ್ಹ, ರಾಯ್‌ ಕ್ಯಾಸ್ತಲಿನೊ, ಪಾಲನ ಸಮಿತಿಯ ಕಾರ್ಯದರ್ಶಿ ಡಾ| ಜಾನ್‌ ಡಿ’ಸಿಲ್ವಾ, ಮಾಧ್ಯಮ ಸಂಯೋಜಕ ಎಲಿಯಾಸ್‌ ಫೆರ್ನಾಂಡಿಸ್‌, ಕೆನರಾ ಕಮ್ಯುನಿ ಕೇಶನ್‌ನ ಸೆಂಟರ್‌ನ ನಿರ್ದೇಶಕ ವಂ| ಅನಿಲ್‌ ಐವನ್‌ ಫೆರ್ನಾಂಡಿಸ್‌, ಎಸ್ಟೇಟ್‌ ಮ್ಯಾನೇಜರ್‌ ವಂ| ಮ್ಯಾಕ್ಸಿಂ ರೊಜಾರಿಯೊ, ಬಿಷಪ್‌ ಅವರ ಕಾರ್ಯದರ್ಶಿ ವಂ| ತ್ರಿಷಾನ್‌ ಡಿ’ಸೋಜಾ, ಫಾ| ವೆಲೇರಿಯನ್‌ ಫೆರ್ನಾಂಡಿಸ್‌, ವಂ| ರೂಪೇಶ್‌ ಮಾಡ್ತ, ಸುಶೀಲ್‌ ನೊರೊನ್ಹಾ ಮೊದ ಲಾದವರು ಉಪಸ್ಥಿತರಿದ್ದರು.

ಬಿಷಪ್‌ ಅವರು ಡಿ. 24ರಂದು ರಾತ್ರಿ 7.30ಕ್ಕೆ ಮಂಗಳೂರು ರೊಸಾರಿಯೊದ ಅವರ್‌ ಲೇಡಿ ಆಫ್ ಹೋಲಿ ರೋಸರಿ ಕೆಥೆಡ್ರಲ್‌ನಲ್ಲಿ ಸಾಮೂಹಿಕ ಕ್ರಿಸ್ಮಸ್‌ ಸಂಭ್ರಮಾಚರಣೆಯಲ್ಲಿ (ಕ್ರಿಸ್ಮಸ್‌ ಈವ್‌ ಮಾಸ್‌) ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next