Advertisement

ಮಂಗಲ್ಪಾಡಿ: ಮಲಯಾಳಿ ಶಿಕ್ಷಕ ನೇಮಕಾತಿ ವಿರುದ್ಧ  ಪ್ರತಿಭಟನೆ

12:38 PM Aug 04, 2018 | |

ಕುಂಬಳೆ: ಉಪ್ಪಳ ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ ಮಲೆಯಾಳಿ ಗಣಿತ ಅಧ್ಯಾಪಕ ನೇಮಕಾತಿಯನ್ನು ಪ್ರತಿಭಟಿಸಿ ಶಾಲಾ ವಿದ್ಯಾರ್ಥಿಗಳು ಮತ್ತು ರಕ್ಷಕರಿಂದ ಕಾಸರಗೋಡು ಸಹಾಯಕ ಶಿಕ್ಷಣ ಕಚೇರಿ ಮುಂದೆ ಮುತ್ತಿಗೆ ನಡೆಯಿತು. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ರಕ್ಷಕರು ಒಟ್ಟು ಸೇರಿ ಬಳಿಕ ಎರಡು ವಿಶೇಷ ಬಸ್ಸಿನಲ್ಲಿ ಕಾಸರಗೋಡಿಗೆ ತೆರಳಿ ಉಗ್ರ ಪ್ರತಿಭಟನೆ ಸಲ್ಲಿಸಿದರು. ಜಿ. ಪಂ. ಲೋಕೋಪಯೋಗಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫರಿದಾ ಝಕೀರ್‌, ಪಿ.ಟಿ.ಎ. ಅಧ್ಯಕ್ಷ, ಮಂಗಲ್ಪಾಡಿ ಗ್ರಾ.ಪಂ. ಸದಸ್ಯ ಬಾಲಕೃಷ್ಣ ಅಂಬಾರ್‌, ಎಂ.ಪಿ.ಟಿ.ಎ. ಅಧ್ಯಕ್ಷೆ ಯಶೋದಾ ಪಿ. ಶೆಟ್ಟಿ ಮತ್ತು ವಿದ್ಯಾರ್ಥಿಗಳ ರಕ್ಷಕರು ನೇತೃತ್ವ ವಹಿಸಿದರು. ನೂರಾರು ಮಹಿಳೆಯರ ಸಹಿತ ವಿದ್ಯಾರ್ಥಿಗಳು ಫಲಕ ಹಿಡಿದು ಘೋಷಣೆ ಕೂಗಿ ಪ್ರತಿಭಟನೆ ಸಲ್ಲಿಸಿದರು. ಬಳಿಕ ಸಹಾಯಕ ಶಿಕ್ಷಣ ಅಧಿಕಾರಿ ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

Advertisement

ಮುಂದಿನೆರಡು ದಿನಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಶಾಲೆಯ ಮುಂದೆ ನಿರಾಹಾರ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ವಂಚನೆಯ ಮೂಲಕ ಕನ್ನಡ ಅಧ್ಯಾಪಕ ಹುದ್ದೆಗೆ ನೇಮಕಗೊಂಡ ಕಾರಣ ಮಕ್ಕಳು ಗಣಿತ ಪಾಠದಿಂದ ವಂಚನೆಗೊಳಗಾಗಿದ್ದಾರೆ ಎಂದು ಅವರು ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next