Advertisement

ರಾಜಕೀಯ ಹೈಡ್ರಾಮಕ್ಕೆ ವರ್ಷದಲ್ಲಿ ಆರು ಜಿಲ್ಲಾ ಪಂಚಾಯತ್ ಸಭೆಗಳು ಬಲಿ!

03:36 PM Oct 13, 2020 | keerthan |

ಮಂಡ್ಯ: ಅಧ್ಯಕ್ಷೆ ರಾಜೀನಾಮೆ ಹೈಡ್ರಾಮ ಮುಂದುವರೆದಿದ್ದು, ಮಂಗಳವಾರ ನಿಗದಿಯಾಗಿದ್ದ ಜಿಪಂ ಸಾಮಾನ್ಯ ಸಭೆ ಬಲಿಯಾಯಿತು. ಇದರೊಂದಿಗೆ ಕಳೆದ ವರ್ಷದಿಂದ ಸತತ ಆರು ಸಭೆಗಳು ರಾಜಕೀಯ ದೊಂಬರಾಟಕ್ಕೆ ಮುಂದೂಡಿಕೆಯಾಗಿವೆ.

Advertisement

ಮಂಗಳವಾರ ಬೆಳಿಗ್ಗೆ 11ಕ್ಕೆ ಸಭೆ ನಿಗದಿಪಡಿಸಲಾಗಿತ್ತು. 11.15 ನಿಮಿಷಕ್ಕೆ ಅಧ್ಯಕ್ಷೆ ನಾಗರತ್ನಸ್ವಾಮಿ ಹಾಗೂ ಜಿಪಂ ಸಿಇಒ ಎಸ್.ಎಂ.ಜುಲ್ಫಿಖಾರ್ ಉಲ್ಲಾ ಆಗಮಿಸಿದರು. ಆದರೆ 45 ನಿಮಿಷವಾದರೂ ಯಾವೊಬ್ಬ ಸದಸ್ಯರೂ ಸಭೆಗೆ ಹಾಜರಾಗಲಿಲ್ಲ.

ಇದನ್ನೂ ಓದಿ:ತಾಂತ್ರಿಕ ಸಮಸ್ಯೆ: ಎಸ್‌ಬಿಐ ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆಗಳು ತಾತ್ಕಾಲಿಕ ಸ್ಥಗಿತ

ಇದರಿಂದ ಬೇಸತ್ತ ಅಧ್ಯಕ್ಷೆ ನಾಗರತ್ನಸ್ವಾಮಿ ಇತ್ತೀಚೆಗೆ ನಿಧನರಾದ ಜಿಪಂ ಸದಸ್ಯ ಟಿ.ತಿಮ್ಮೇಗೌಡ, ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್, ಮಾಜಿ ಸಚಿವ ಜಸ್ವಂತ್‌ಸಿನ್ಹಾ ಸೇರಿದಂತೆ ಆಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕೋರಂ ಅಭಾವವಿರುವುದರಿಂದ ಸಭೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಹೇಳಿ ಹೊರ ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next