Advertisement

Mandya; ಕಿಡ್ನ್ಯಾಪರ್‌ ಕೈಗೆ ಕಚ್ಚಿ ತಪ್ಪಿಸಿಕೊಂಡ ಬಾಲಕ; ಸಿನಿಮೀಯ ರೀತಿಯ ಪ್ರಕರಣ

10:03 PM Oct 22, 2024 | Team Udayavani |

ಮಂಡ್ಯ: ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ಬೆಳಗಿನ ಜಾವ ಅಪಹರಣಕ್ಕೊಳಗಾದ ಬಾಲಕನೊಬ್ಬ ಸಿನಿಮೀಯ ರೀತಿಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಿಂದ ಅಪಹರಣಕಾರನ ಕೈಗೆ ಕಚ್ಚಿ ವ್ಯಾನ್ ನಿಂದ ಜಿಗಿದು ತಪ್ಪಿಸಿಕೊಂಡು ಬಂದಿದ್ದು, ಅಪಹರಣ ಪ್ರಕರಣ ಸುಖ್ಯಾಂತ ಕಂಡಿದೆ.

Advertisement

ತಾಲೂಕಿನ ಕೊದೇನಕೊಪ್ಪಲು ಗ್ರಾಮದ ಈರೇಗೌಡ ಎಂಬುವರ ಪುತ್ರ ಯೋಗೇಶ್ ತಪ್ಪಿಸಿಕೊಂಡ ಬಾಲಕ. ಪಟ್ಟಣದ ಹೊರವಲಯದ ಮಾರೇಹಳ್ಳಿ ಆದರ್ಶ ವಿದ್ಯಾಲಯದಲ್ಲಿ ಎಸ್ಎಸ್ಎಲ್ ಸಿ ವ್ಯಾಸಂಗ ಮಾಡುತ್ತಿರುವ ಯೋಗೇಶ್ ಪಟ್ಟಣದ ಗೌಡಯ್ಯನ ಬೀದಿಯ 3ನೇ ಕ್ರಾಸ್ ಅವರ ಮಾವ ಮನೆಯಲ್ಲಿದ್ದು ಶಾಲೆಗೆ ಹೋಗಿ ಬರುವುದು ಮಾಡುತ್ತಿದ್ದ.  ಎಂದಿನಂತೆ ಹಳೆ ಕೋರ್ಟ್ ಹಿಂಭಾಗದಲ್ಲಿ ಟ್ಯೂಷನ್ ಹೋಗುತ್ತಿದ್ದ ವೇಳೆ ಮಂಗಳವಾರ ಬೆಳಗಿನ ಜಾವ 5.20ರ ಸಮಯದಲ್ಲಿ ಓಮಿನಿ ಕಾರಿನಲ್ಲಿ ಬಂದ ಮಂಕಿ ಕ್ಯಾಪ್ ಧರಿಸಿದ ಅಪಹರಣಕಾರರು ಬಾಲಕನ ಮೇಕೆ ಹಲ್ಲೆ ನಡೆಸಿ ಅಪಹರಿಸಿದ್ದಾರೆ.

ಅಪಹರಣಕಾರರು ಪಿರಿಯಾಪಟ್ಟಣದಲ್ಲಿ ವಾಹನ ನಿಲ್ಲಿಸಿ ಸಿಗರೇಟ್ ಸೇದುತ್ತಿದ್ದ ವೇಳೆ ಅಪಹರಣಕಾರನ ಕೈ ಕಚ್ಚಿ ಸುಮಾರು ಒಂದು ಕೀ.ಮೀ. ದೂರ ಓಡಿಬಂದು ಕ್ಯಾಬ್ ಚಾಲಕನೊಬ್ಬರ ನಂಬರ್ ನಿಂದ ಅವರ ಮಾವನಿಗೆ ಕಾಲ್ ಮಾಡಿ ನಡೆದ ಘಟನೆಯಲ್ಲಿ ವಿವರಿಸಿದ್ದಾನೆ. ಅಪಹರಣಕಾರರು ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು.

ಕೂಡಲೇ ಪಿರಿಯಾಪಟ್ಟಣಕ್ಕೆ ತೆರಳಿದ್ದ ಸಂಬಂಧಿಕರು ಬಾಲಕನನ್ನು ಕರೆದುಕೊಂಡು ಮಳವಳ್ಳಿಗೆ ಬಂದಿದ್ದಾರೆ ಎಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಾಲಕನ ತಂದೆ ಈರೇಗೌಡ ದೂರು ನೀಡಿದ್ದಾರೆ. ಈ ಸಂಬಂಧ ಐವರು ಅಪರಿಚಿತರು ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next