Advertisement

ಮಂಡ್ಯ : ಜೈಲಿನಲ್ಲೇ ವಿಚಾರಣಾಧೀನ ಕೈದಿ ಆತ್ಮಹತ್ಯೆ 

03:20 PM Jul 21, 2017 | Team Udayavani |

ಮಂಡ್ಯ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ.

Advertisement

ಸರಗಳ್ಳತನ ಪ್ರಕರಣದಲ್ಲಿ 3 ತಿಂಗಳ ಹಿಂದೆ ಜೈಲು ಸೇರಿದ್ದ ರಾಘವೇಂದ್ರ (33) ಎಂಬ ಕೈದಿ ಹೊದಿಯಲು ಕೊಟ್ಟ ಬಟ್ಟೆಯನ್ನುನೇಣು ಕುಣಿಕೆಯನ್ನಾಗಿಸಿ ಕಿಟಕಿಗೆ ಬಿಗಿದು ಸಾವಿಗೆ ಶರಣಾಗಿದ್ದಾನೆ. 

ರಾಘವೇಂದ್ರನನ್ನು ಮನೆಯವರು ಬಹಿಷ್ಕರಿಸಿದ್ದು, ಜಾಮೀನು ನೀಡಲಾಗಲಿ,ಜೈಲಿನಲ್ಲಿ ನೋಡಲೂ ಬಂದಿರಲಿಲ್ಲ. ಇದರಿಂದಾಗಿ ಖನ್ನನಾಗಿ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

ಮಂಡ್ಯ ಎಸ್‌ಪಿ ರಾಧಿಕಾ ಅವರು ಜೈಲಿಗೆ ಆಗಮಿಸಿ ಪರಿಶೀಲನೆ ನಡೆಸಿ ವಿವರಣೆ ಕೇಳಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next