Advertisement

ಮಂಡ್ಯದಲ್ಲಿ ಪತ್ನಿ ಡಿಸಿ-ಮೈಸೂರಿನಲ್ಲಿ ಪತಿ: ಗೌತಮ್ ಬಗಾದಿಗೆ ಶುಭ ಕೋರಿದ ಪತ್ನಿ ಅಶ್ವಥಿ

05:17 PM Jun 06, 2021 | Team Udayavani |

ಮಂಡ್ಯ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿದ್ದ ಡಾ.ಗೌತಮ್ ಬಗಾದಿ ನೇಮಕವಾಗಿದ್ದಾರೆ. ವಿಶೇಷವೆಂದರೆ ಮೈಸೂರು ಡಿಸಿ ಗೌತಮ್ ಬಗಾದಿ ಮತ್ತು ನೆರೆಯ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ದಂಪತಿಗಳು. ಈ ಹಿನ್ನೆಲೆಯಲ್ಲಿ ಎಸ್.ಅಶ್ವಥಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಪತಿ ಡಾ.ಗೌತಮ್ ಬಗಾದಿಗೆ ಶುಭ ಕೋರಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌತಮ್ ಬಗಾದಿ ಭಾನುವಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರಿಂದ ಮೈಸೂರು ಜಿಲ್ಲೆಗೆ ಒಳ್ಳೆಯದಾಗಲಿ. ಜಿಲ್ಲೆಯ ಕೆಲಸಗಳು ಸರಾಗವಾಗಿ ನಡೆಯಲಿ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ. ಆದರೂ ಪತಿ ಗೌತಮ್ ಜಿಲ್ಲಾಧಿಕಾರಿಯಾಗಿ ಬಂದಿರುವುದರಿಂದ ಅವರಿಂದ ಮೈಸೂರು ಜಿಲ್ಲೆಯ ಜನಕ್ಕೆ ಒಳಿತಾಗಬೇಕೆಂಬುದು ನನ್ನ ಆಶಯ ಎಂದರು.

ಇದನ್ನೂ ಓದಿ:ವರ್ಗಾವಣೆ ಬೆನ್ನಲ್ಲೇ ಸಿಎಂ ಭೇಟಿಗೆ ದೌಡಾಯಿಸಿದ ರೋಹಿಣಿ ಸಿಂಧೂರಿ

ನನ್ನ ಪತಿ ನಾನು ಪ್ರತಿನಿಧಿಸುವ ಪಕ್ಕದ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿರುವುದು ಖುಷಿ ತಂದಿದೆ. ಆದರೆ ನಮ್ಮಿಬ್ಬರ ವೈಯಕ್ತಿಕ ವಿಚಾರಕ್ಕಿಂತ ರಾಜ್ಯ ಹಾಗೂ ಎರಡು ಜಿಲ್ಲೆಗಳ ಹೊಣೆ ನಮ್ಮ ಮೇಲಿದೆ. ಅದನ್ನು ನಾವಿಬ್ಬರೂ ನಿಭಾಯಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಪತಿ-ಪತ್ನಿ ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳಾಗಿ ನೇಮಕವಾಗಿದ್ದು, ಇಬ್ಬರಿಗೂ ಖುಷಿ ತಂದಿದ್ದು, ಮಂಡ್ಯ ಡಿಸಿ ಎಸ್.ಅಶ್ವಥಿ ಸಂತಸ ವ್ಯಕ್ತಪಡಿಸಿದರು.

Advertisement

ಪತಿ-ಪತ್ನಿ ಡಿಸಿ ಆಗಿದ್ದು ಮೊದಲೇನಲ್ಲ: ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ಪತಿ ಹಾಗೂ ಪತ್ನಿ ಜಿಲ್ಲಾಧಿಕಾರಿಯಾಗಿ ಒಟ್ಟಿಗೆ ಕೆಲಸ ನಿರ್ವಹಿಸಿದ್ದು, ಇದು ಮೊದಲೇನಲ್ಲ. ನಾಲ್ಕು ವರ್ಷಗಳ ಹಿಂದೆ ಶಿಖಾ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರೆ ಅವರ ಪತಿ ಡಾ.ಅಜಯ್‌ ನಾಗಭೂಷಣ್ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಆದರೆ ಇದೀಗ ಅಶ್ವಥಿ ಹಾಗೂ ಗೌತಮ್ ಬಗಾದಿ ಪತಿ-ಪತ್ನಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿದೆ.

ಇದರಲ್ಲಿ ಶಿಖಾ ಅವರ ಪತಿ ಡಾ.ಅಜಯ್‌ ನಾಗಭೂಷಣ್ ಹಾಗೂ ಅಶ್ವಥಿ ಪತಿ ಡಾ.ಗೌತಮ್ ಬಗಾದಿ ಇಬ್ಬರೂ ವೈದ್ಯಕೀಯ ಶಿಕ್ಷಣ ಪಡೆದಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next