Advertisement

ಮಗನ ಮೇಲೆ ಅಪ್ಪನ ಕನಸು: ಕಾಲೇಜ್‌ ಸ್ಟೋರಿ ಸುತ್ತ ‘ಮನಸಾಗಿದೆ’

12:03 PM Apr 02, 2021 | Team Udayavani |

ಚಂದನವನದಲ್ಲಿ ಹೊಸಬರ ಲವ್‌ ಕಂ ರೊಮ್ಯಾಂಟಿಕ್‌ ಚಿತ್ರಗಳ ಟ್ರೆಂಡ್‌ ಮುಂದುವರೆದಿದ್ದು, ಈ ಸಾಲಿಗೆ ಇದೀಗ “ಮನಸಾಗಿದೆ’ ಎಂಬ ಚಿತ್ರವೂ ಸೇರ್ಪಡೆಯಾಗುತ್ತಿದೆ. “ಮನಸಾಗಿದೆ’ ಚಿತ್ರದ ಮೂಲಕ ನವ ಪ್ರತಿಭೆ ಅಭಯ್‌ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

Advertisement

ಇತ್ತೀಚೆಗೆ “ಮನಸಾಗಿದೆ’ ಚಿತ್ರದ ಟೈಟಲ್‌ ಬಿಡುಗಡೆ ಸಮಾರಂಭ ನಡೆಸಿದ ಚಿತ್ರತಂಡ, ಚಿತ್ರದ ನಾಯಕ ಅಭಯ್‌ ಮತ್ತು ಚಿತ್ರದ ಕಲಾವಿದರು, ತಂತ್ರಜ್ಞರನ್ನು ಮಾಧ್ಯಮಗಳಿಗೆ ಪರಿಚಯಿಸಿತು.

“ತೇಜಸ್‌ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ಎಸ್‌. ಚಂದ್ರಶೇಖರ್‌ “ಮನಸಾಗಿದೆ’ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀನಿವಾಸ ಶಿಡ್ಲಘಟ್ಟ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

“ಮನಸಾಗಿದೆ’ ಚಿತ್ರದಲ್ಲಿ ನಾಯಕ ಅಭಯ್‌ಗೆ ಮೇಘಶ್ರೀ, ಅಧಿರ ನಾಯಕಿಯರಾಗಿ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಸುರೇಶ್‌ ರೈ, ಭವ್ಯಶ್ರೀ ರೈ, ಸೂರಜ್‌, ವಿಕ್ಕಿ, ತೇಜಸ್‌, ವಿನು ಮಹೇಶ್‌ ಮೊದಲಾದವರು “ಮನಸಾಗಿದೆ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ:ತೋತಾಪುರಿಯ ಕಲರ್‌ಫುಲ್ ಹಾಡು: ಹೆಜ್ಜೆ ಹಾಕಿದ ಜಗ್ಗೇಶ್‌-ಅದಿತಿ ಪ್ರಭುದೇವ

Advertisement

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಎಸ್‌. ಚಂದ್ರಶೇಖರ್‌, “ಈ ಹಿಂದೆ ಮೂರ್‍ನಾಲ್ಕು ಸಿನಿಮಾಗಳನ್ನು ಮಾಡಿದ ಅನುಭವವಿದ್ದು, ಈ ಬಾರಿ ನಾನೇ ಬರೆದ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದೇನೆ. ಇದೊಂದು ಯೂಥ್‌ ಸಬೆjಕ್ಟ್. ಕೆಲವರು ಪ್ರೀತಿಯನ್ನ ಹುಡುಕಿಕೊಂಡು ಹೋಗ್ತಾರೆ. ಇನ್ನು ಕೆಲವರನ್ನು ಪ್ರೀತಿಯೇ ಹುಡುಕಿಕೊಂಡು ಬರುತ್ತದೆ. ಹೀಗೆ ಅರಸಿಕೊಂಡು ಬಂದ ಪ್ರೀತಿಯನ್ನು ಹುಡುಗನೊಬ್ಬ ಪಡೆಯುತ್ತಾನಾ ಇಲ್ಲವಾ? ಅನ್ನೋದು ಚಿತ್ರದ ಕಥೆಯ ಒಂದು ಎಳೆ’ ಎಂದು ಕಥೆಯ ಬಗ್ಗೆ ವಿವರಣೆ ನೀಡಿದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀನಿವಾಸ್‌ ಶಿಡ್ಲಘಟ್ಟ, “ಇದೊಂದು ಕಂಪ್ಲೀಟ್‌ ಮನರಂಜನೆ ನೀಡುವಂಥ ಸಿನಿಮಾವಾಗಲಿದೆ. ಇಡೀ ಸಿನಿಮಾದಲ್ಲಿ ಇಂದಿನ ಯೂಥ್ಸ್ಗೆ ಹತ್ತಿರವಾಗುವಂಥ ಹತ್ತಾರು ವಿಷಯಗಳಿವೆ’ ಎಂದರು. ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮಾತನಾಡಿದ ಯುವ ನಾಯಕ ನಟ ಅಭಯ್‌, “ಇಂದಿನ ಕಾಲೇಜ್‌ ಹುಡುಗರು ಹೇಗಿರುತ್ತಾರೋ, ಅಂಥದ್ದೇ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌ ಹೀಗೆ ಎಲ್ಲ ಥರದ ಶೇಡ್ಸ್‌ ನನ್ನ ಪಾತ್ರದಲ್ಲಿದೆ. ಈಗಾಗಲೇ ಪಾತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸ್ಕ್ರೀನ್‌ ಮೇಲೆ ನನ್ನ ಪಾತ್ರ ಹೇಗೆ ಬರಲಿದೆ ಅನ್ನೋ ಕುತೂಹಲ ನನಗೂ ಇದೆ’ ಎಂದರು.

“ಮನಸಾಗಿದೆ’ ಚಿತ್ರದ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ಸಂಯೋಜಿಸುತ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕ್ಕೆ ಶಂಕರ್‌ ಛಾಯಾಗ್ರಹಣ, ಶಿವಪ್ರಸಾದ್‌ ಯಾದವ್‌ ಸಂಕಲನವಿದೆ. ಚಿತ್ರದ ಸಾಹಸ ದೃಶ್ಯಗಳಿಗೆ ಥ್ರಿಲ್ಲರ್‌ ಮಂಜು ಸಾಹಸ ಸಂಯೋಜಿಸುತ್ತಿದ್ದಾರೆ.

ಜಿ.ಎಸ್.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next