Advertisement

ಅಧಿಕಾರಿಗೆ ಕ್ರಿಮಿನಲ್‌ ಬೆದರಿಕೆ: ರಾಜ್ಯಪಾಲರ ನಕಲಿ ಪುತ್ರ ಅರೆಸ್ಟ್‌

03:29 PM Apr 27, 2017 | Team Udayavani |

ಹೈದರಾಬಾದ್‌ : ಮಹಾರಾಷ್ಟ್ರ ರಾಜ್ಯಪಾಲ ಸಿಎಚ್‌ ವಿದ್ಯಾಸಾಗರ ರಾವ್‌ ಅವರ ಪುತ್ರ ತಾನೆಂದು ಹೇಳಿಕೊಂಡು ಸರಕಾರಿ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿ ನಿವೇಶನವೊಂದರ ಮೇಲಿನ ಹಕ್ಕನ್ನು ತನಗೆ ಬಿಟ್ಟುಕೊಡುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

Advertisement

ಬಂಧಿತ ವ್ಯಕ್ತಿಯನ್ನು ಶ್ರೀಧರ ರಾವ್‌ ಎಂದು ಗುರುತಿಸಲಾಗಿದೆ. ಈತನಿಗೂ ರಾಜ್ಯಪಾಲ ವಿದ್ಯಾಸಾಗರ ರಾವ್‌ ಅವರ ಪುತ್ರ ವಿವೇಕ್‌ ಅವರಿಗೂ ಯಾವದೇ ಸಂಬಂಧ ಇಲ್ಲವೆಂದು ಖಚಿತವಾಗಿದೆ. 

ಆರೋಪಿ ಶ್ರೀಧರ ರಾವ್‌ ತಾನು ರಾಜ್ಯಪಾಲರ ಪುತ್ರ ವಿವೇಕ್‌ ಎಂದು ಹೇಳಿಕೊಂಡು ಸರಕಾರಿ ಕಚೇರಿಯೊಂದರಲ್ಲಿ ಆಫೀಸ್‌ ಸುಪರಿಂಟೆಂಡೆಂಟ್‌ ಆಗಿ ದುಡಿಯುತ್ತಿರುವ ವ್ಯಕ್ತಿಯೊಬ್ಬರಿಗೆ ಫೋನ್‌ ಮಾಡಿ 1800 ಚದರಡಿಯ ನಿವೇಶನವೊಂದರ ಮೇಲಿನ ಹಕ್ಕನ್ನು ತನಗೆ ಬಿಟ್ಟುಕೊಡಬೇಕೆಂದು ಬೆದರಿಕೆ ಒಡ್ಡಿ ಮಾನಸಿಕ ಕಿರುಕುಳ ನೀಡಿದ್ದ. ಸಂತ್ರಸ್ತ ಸುಪರಿಂಟೆಂಡೆಂಟ್‌ ಅಧಿಕಾರಿ ಬೊವೇನಪಲ್ಲಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದರು. 

ಪೊಲೀಸರು ಈ ದೂರಿನ ಆಧಾರದಲ್ಲಿ ರಾಜ್ಯಪಾಲರ ನಕಲಿ ಪುತ್ರನಾದ ಆರೋಪಿ ಶ್ರೀಧರ ರಾವ್‌ ನನ್ನು ಚಾಣಾಕ್ಷತನಿಂದ ಪತ್ತೆ ಹಚ್ಚಿ ಬಂಧಿಸಿದರು. ಆತನ ವಿರುದ್ಧ ಪೊಲೀಸರು ಐಪಿಸಿ ಸೆ.506ರ ಪ್ರಕಾರ (ಕ್ರಿಮಿನಲ್‌ ಬೆದರಿಕೆ) ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next