Advertisement

ಶಾಲಾ ಕಟ್ಟಡದಿಂದ ಬಿದ್ದು ಯುವಕ ಸಾವು

05:27 PM Feb 09, 2023 | Team Udayavani |

ಮಂಜೇಶ್ವರ: ಶಾಲಾ ಕಟ್ಟಡದ ಮೇಲಿರುವ ನೀರಿನ ಟ್ಯಾಂಕ್‌ ಶುಚೀಕರಿಸುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಉದ್ಯಾವರ ಚೌಕಿ ನಿವಾಸಿ ಮೊದೀನ್‌ ಅವರ ಪುತ್ರ ಅಹಮ್ಮದ್‌ ಪವಾಸ್‌ (21) ಮೃತಪಟ್ಟಿದ್ದಾರೆ.

Advertisement

ಮೃತರು ಮಂಜೇಶ್ವರ ಕರೋಡದಲ್ಲಿರುವ ಸಿರಾಜುಲ್‌ ಹುದಾ ಆಂಗ್ಲ ಮಾಧ್ಯಮ ಶಾಲೆಯ ಬಸ್‌ ಕ್ಲೀನರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಶಾಲೆಯ ಕಟ್ಟಡದ ಮೇಲಿರುವ ಫೈಬರ್‌ ಟ್ಯಾಂಕ್‌ ಶುಚೀಕರಿಸುತ್ತಿದ್ದಾಗ ಘಟನೆ ನಡೆದಿದೆ.

ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next