Advertisement

ಮಣಿಪಾಲ: ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದ್ದ ವ್ಯಕ್ತಿ ಸಾವು

07:46 PM Sep 03, 2022 | Team Udayavani |

ಉಡುಪಿ: ಮಣಿಪಾಲದ ಖಾಸಗಿ ಗ್ಯಾಸ್ ಎಜೆನ್ಸಿಯವರ ವಾಹನದಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದ ಹೆರ್ಗಾ ನಿವಾಸಿ ಮಂಜುನಾಥ (28) ಸೆ.2 ಸಾವನ್ನಪ್ಪಿದ್ದಾರೆ.

Advertisement

ಸೆ.2ರಂದು ಗಣೇಶ ಮೂರ್ತಿಯ ವಿಸರ್ಜನೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಅಣ್ಣನ ಮನೆಯ ಟೆರೇಸ್ ಮೇಲೆ ಹೋಗಿ ಮಲಗಿದ್ದರು. ಸೆ.3ರಂದು  ಬೆಳಗ್ಗೆ ಎದ್ದಾಗ ಅಸ್ವಸ್ಥಗೊಂಡಿದ್ದರು. ಈ ವೇಳೆ ಅಣ್ಣ ಹಾಗೂ ಗೆಳೆಯರು ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next