Advertisement

ಕಬ್ಬಿಣದ ಸರಳು ವ್ಯಕ್ತಿಯೊಬ್ಬರ ಕುತ್ತಿಗೆಯನ್ನೇ ಸೀಳಿತು!

07:17 PM Dec 02, 2022 | Team Udayavani |

ನವದೆಹಲಿ: ದೆಹಲಿ-ಕಾನ್ಪುರ ನೀಲಾಚಲ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶುಕ್ರವಾರ ದುರಂತವೊಂದು ಸಂಭವಿಸಿದೆ.

Advertisement

ಹೊರಗಿದ್ದ ಕಬ್ಬಿಣದ ಸರಳೊಂದು ರೈಲಿನ ಜನರಲ್‌ ಬೋಗಿಯ ಗಾಜಿನ ಕಿಟಕಿಯೊಳಕ್ಕೆ ನುಗ್ಗಿ, ಕಿಟಕಿ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬರ ಕುತ್ತಿಗೆಯನ್ನು ಸೀಳಿರುವ ಘಟನೆ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಹೃಷಿಕೇಶ್‌ ದುಬೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳಿಯ ಸಮೀಪದಲ್ಲೇ ಯಾವುದೋ ಕಾಮಗಾರಿಯೊಂದು ನಡೆಯುತ್ತಿತ್ತು.

ಹೀಗಾಗಿ, ಅಲ್ಲಿ ಬಳಸಲಾಗುತ್ತಿದ್ದ ಕಬ್ಬಿಣದ ರಾಡ್‌, ಬೋಗಿಯ ಕಿಟಕಿಯೊಳಕ್ಕೆ ತೂರಿ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next