Advertisement

ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

12:24 PM Jul 26, 2017 | udayavani editorial |

ಹೈದರಾಬಾದ್‌ : ತೆಲಂಗಾಣದ ಖಮ್ಮಾಮ್‌ ಜಿಲ್ಲೆಯಲ್ಲಿ 32ರ ಹರೆಯದ ವ್ಯಕ್ತಿಯೋರ್ವ ತನ್ನ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಭೀಭತ್ಸಕರ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಎಸ್‌ ಸಲೀಂ ಎಂಬಾತನು ತನ್ನ ತಂದೆ, ತಾಯಿ, ಪತ್ನಿ ಹಾಗೂ 10ರ ಕೆಳ ಹರೆಯದ ಇಬ್ಬರು ಮಕ್ಕಳನ್ನು ಕಾಲುವೆಗೆ ದೂಡಿ ಕೊಂದು ಬಳಿಕ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಮಂಗಳವಾರ ರಾತ್ರಿ ಜಿಲ್ಲಾಚೇರುವು ಎಂಬ ಗ್ರಾಮದಲ್ಲಿ ನಡೆಯಿತೆಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಕುಟುಂಬ ವಿವಾದದಿಂದಾಗಿ ತಾನು ಈ ಕೃತ್ಯ ನಡೆಸಿದೆ ಎಂದು ಸಲೀಂ ಬರೆದಿಟ್ಟಿದ್ದ ಡೆತ್‌ ನೋಟ್‌ ಆತನ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿದೆ. ಅದನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. 

ಕಾಲುವೆಯಲ್ಲಿ ಎಲ್ಲ ಆರು ಮೃತದೇಹಗಳು ಸಿಕ್ಕಿದ್ದು ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next