Advertisement

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

09:17 AM Apr 29, 2024 | Team Udayavani |

ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಾನುವಾರ ಬಂಧಿಸಿದೆ.

Advertisement

ಗುಜರಾತ್‌ನ ಜಾಮ್‌ನಗರ ನಿವಾಸಿ ಮೊಹಮ್ಮದ್ ಸಕ್ಲೇನ್ ಎಂಬಾತ ಪಾಕಿಸ್ತಾನದ ಸೂಚನೆ ಮೇರೆಗೆ ಬೇಹುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ಎನ್ನಲಾಗಿದೆ.

ಜಾಮ್‌ನಗರದ ನಿವಾಸಿ ಮೊಹಮ್ಮದ್ ಸಕ್ಲೇನ್ ಎಂಬಾತ ಸಿಮ್ ಕಾರ್ಡ್ ಖರೀದಿಸಿ ಭಾರತೀಯ ನಂಬರ್‌ನಲ್ಲಿ ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿದ್ದ ಅಲ್ಲದೆ ಇದನ್ನು ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ಸಿಬ್ಬಂದಿ ವಿರುದ್ಧ ಬೇಹುಗಾರಿಕೆ ನಡೆಸಲು ಈ ಸಂಖ್ಯೆಯನ್ನು ಬಳಸಲಾಗುತ್ತಿತ್ತು ಮತ್ತು ಪಾಕಿಸ್ತಾನಿ ಕಾರ್ಯಕರ್ತರಿಗೆ ಗೌಪ್ಯ ಮಾಹಿತಿ ಸೋರಿಕೆಯಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಿಲಿಟರಿ ಗುಪ್ತಚರ ಒದಗಿಸಿದ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಕಳೆದ ಅಕ್ಟೋಬರ್ 2023 ರಲ್ಲಿ, ಗುಜರಾತ್ ಎಟಿಎಸ್ 53 ವರ್ಷದ ಬೇಹುಗಾರಿಕೆ ಏಜೆಂಟ್ ಲಾಭಶಂಕರ್ ಮಹೇಶ್ವರಿ ಅವರನ್ನು ತಾರಾಪುರದಿಂದ (ಗುಜರಾತ್) ಬಂಧಿಸಿತು. ಇದಾದ ಬಳಿಕ ಭಾನುವಾರ ಮೊಹಮ್ಮದ್ ಸಕ್ಲೇನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತೀಯ ಸೇನೆಯ ಸೈನಿಕರ ಮೊಬೈಲ್ ಫೋನ್‌ಗಳಲ್ಲಿ ಮಾಲ್‌ವೇರ್ ಕಳುಹಿಸುವ ಮೂಲಕ ಗುಜರಾತ್ ಎಟಿಎಸ್ ಪಾಕಿಸ್ತಾನದ ಗೂಢಚಾರಿಕೆಯ ಸಂಚು ಬಹಿರಂಗಪಡಿಸಿದೆ ಎಂದು ಹೇಳಲಾಗಿದೆ. ಪಾಕಿಸ್ತಾನಿ ಏಜೆನ್ಸಿಯ ಗೂಢಚಾರರೊಬ್ಬರು ಭಾರತೀಯ ಸೇವಾ ಸಿಬ್ಬಂದಿಯ ಫೋನ್‌ಗಳಿಗೆ ಅನುಮಾನಾಸ್ಪದ ಲಿಂಕ್‌ಗಳನ್ನು ಕಳುಹಿಸುತ್ತಿದ್ದಾರೆ, ಅವರ ಫೋನ್ ಡೇಟಾವನ್ನು ಹ್ಯಾಕ್ ಮಾಡುತ್ತಿದ್ದಾರೆ ಮತ್ತು ಭಾರತೀಯ ಸೇನೆಯ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ಗುಜರಾತ್ ಎಟಿಎಸ್ ಮಿಲಿಟರಿ ಗುಪ್ತಚರದಿಂದ ಮಾಹಿತಿ ಸ್ವೀಕರಿಸಿತ್ತು.

ಇದನ್ನೂ ಓದಿ: Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next