Advertisement

ನದಿಗೆ ಶವ ಎಸೆದ ಪಿಪಿಇ ಕಿಟ್ ಧರಿಸಿದ ವ್ಯಕ್ತಿ

02:37 PM May 30, 2021 | Team Udayavani |

ಉತ್ತರ ಪ್ರದೇಶ : ಇತ್ತೀಚಿಗಷ್ಟೆ ಬಿಹಾರ್ ಹಾಗೂ ಉತ್ತರ ಪ್ರದೇಶದಲ್ಲಿ ನದಿಯಲ್ಲಿ ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಶವಗಳ ರಾಶಿ ತೇಲಿದ ಘಟನೆ ಮಾಸುವ ಮುನ್ನವೆ, ಪಿಪಿಇ ಕಿಟ್ ಧರಿಸಿದ ವ್ಯಕ್ತಿಯೋರ್ವ ನದಿಗೆ ಶವ ಎಸೆಯುತ್ತಿರುವ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಉತ್ತರ ಪ್ರದೇಶದಲ್ಲಿ ಹರಿಯುವ ರಪ್ತಿ ನದಿಯಲ್ಲಿ ಶವ ಎಸೆಯಲಾಗಿದೆ.  ಈ ಘಟನೆ ಮೇ.28 ರಂದು ನಡೆದಿದೆ. ಪಿಪಿಇ ಕಿಟ್ ಧರಿಸಿದ ವ್ಯಕ್ತಿ ಸೇರಿದಂತೆ ಇಬ್ಬರು ಕೋವಿಡ್ ನಿಂದ ಮೃತ ಪಟ್ಟ ವ್ಯಕ್ತಿಯ ಶವವನ್ನು ಬರ್ಲಾಂಪುರ ಜಿಲ್ಲೆಯ ಕೊಟವಾಲಿ ಸಮೀಪ ನದಿಗೆ ಬೀಸಾಡಿದ್ದಾರೆ. ಈ ದೃಶ್ಯವನ್ನು ಅನಾಮದೇಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ನದಿಗೆ ಎಸೆಯಲಾದ ಶವ ಪ್ರೇಮನಾಥ್ ಎಂಬುವರದು ಎಂದು ಪೊಲೀಸರು ಗುರುತಿಸಿದ್ದಾರೆ. ಸಿದ್ದಾರ್ಥ್ ನಗರದ ನಿವಾಸಿಯಾಗಿದ್ದ ಈತನಿಗೆ ಮೇ.25 ರಂದು ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದ ಆತ ಮೇ. 28 ರಂದು ಸಾವನ್ನಪ್ಪಿದ್ದ.

ಕೋವಿಡ್ ನಿಯಮಾವಳಿಯಂತೆ ಪ್ರೇಮನಾಥ್ ಶವವನ್ನು ಅಂತ್ಯಕ್ರಿಯೆ ನಡೆಸಲು ಆತನ ಕುಟುಂಬದ ಸುಪರ್ದಿಗೆ ಒಪ್ಪಿಸಲಾಗಿತ್ತು. ಆದರೆ, ಅವರು ಮೃತದೇಹವನ್ನು ನದಿಗೆ ಹಾಕಿದ್ದಾರೆ ಎಂದು ಬರ್ಲಾಂಪುರ ವೈದ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next