Advertisement

ಕುಡಿದ ಅಮಲಿನಲ್ಲಿ ಗರ್ಭಿಣಿ ಪತ್ನಿ, ಅತ್ತೆ, ಇಬ್ಬರು ಮಕ್ಕಳನ್ನು ಕೊಲೆಗೈದ ಪಾಪಿ!

11:17 AM Apr 29, 2021 | Team Udayavani |

ಮೈಸೂರು: ಕಂಠಪೂರ್ತಿ ಕುಡಿದ ವ್ಯಕ್ತಿಯೋರ್ವ ಮನೆಮಂದಿಯ ಮೇಲೆ ಹಲ್ಲೆ ನಡೆಸಿ ನಾಲ್ವರನ್ನು ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ತನ್ನ ಗರ್ಭಿಣಿ ಪತ್ನಿ, ಇಬ್ಬರು ಸಣ್ಣ ಮಕ್ಕಳು ಮತ್ತು ಅತ್ತೆಯನ್ನು ಆರೋಪಿ ಕೊಲೆಗೈದಿದ್ದಾನೆ.

Advertisement

ಅತ್ತೆ ಕೆಂಪಾಜಮ್ಮ (60 ವ), ಗರ್ಭಿಣಿ ಪತ್ನಿ ಗಂಗಾ (28 ವ), ಇಬ್ಬರು ಗಂಡು ಮಕ್ಳಳಾದ ರೋಹಿತ್ (4 ವ) ಮತ್ತು ಸಾಮ್ರಾಟ್ (2 ವ) ಮೃತ ದುರ್ದೈವಿಗಳು.  ಆರೋಪಿ ಮಣಿಕಂಠಸ್ವಾಮಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ:ಇಂದು ಹಸೆಮಣೆ ಏರಬೇಕಿದ್ದ ಯುವಕ ಕೋವಿಡ್-19 ಸೋಂಕಿಗೆ ಬಲಿ

ಸರಗೂರು ಠಾಣಾ ವ್ಯಾಪ್ತಿಯ ಚಾಮೇಗೌಡನಹುಂಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.

ಆರೋಪಿಯು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಮಾಡಿರುವ ಶಂಕ ವ್ಯಕ್ತವಾಗಿದೆ.

Advertisement

ಘಟನಾ ಸ್ಥಳಕ್ಕೆ ಸರಗೂರು ಪಿಎಸ್ ಐ ದಿವ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಚ್.ಡಿ.ಕೋಟೆ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next