Advertisement

ಕಲ್ಲು ತೂರಾಟ: ವಂದೇ ಭಾರತ್‌ ಕಿಟಕಿ ಗಾಜಿಗೆ ಹಾನಿ

07:29 PM Dec 15, 2022 | Team Udayavani |

ರಾಯ್ಪುರ: ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನಾಗ್ಪುರ-ಬಿಲಾಸ್ಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಛತ್ತೀಸ್‌ಗಡದಲ್ಲಿ ದುಷ್ಕರ್ಮಿಯೊಬ್ಬ ಕಲ್ಲು ತೂರಿದ ಪರಿಣಾಮ, ರೈಲಿನ ಕಿಟಕಿಯ ಗಾಜು ಒಡೆದುಹೋಗಿದೆ.

Advertisement

ರಾಯ್ಪುರ ವಿಭಾಗದ ದುರ್ಗ್‌ ಮತ್ತು ಭಿಲಾಯಿ ನಗರ ರೈಲ್ವೆ ನಿಲ್ದಾಣದ ಮಧ್ಯೆ ಈ ಘಟನೆ ನಡೆದಿದೆ. ಕಳೆದ ಭಾನುವಾರವಷ್ಟೇ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಬುಧವಾರ ಸಂಜೆ ರೈಲು ಬಿಲಾಸ್ಪುರದ ಕಡೆಗೆ ಸಂಚರಿಸುತ್ತಿದ್ದಾಗ, ಹೊರಗಿನಿಂದ ಯಾರೋ ಕಲ್ಲು ತೂರಿದ ಕಾರಣ ಕಿಟಕಿ ಗಾಜು ಒಡೆದಿದೆ. ಒಳಗಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next