Advertisement

ಜಯನಗರದ ಮಳೆಮಲ್ಲೇಶ್ವರ ಗುಡ್ಡದಲ್ಲಿ ಕರಡಿ ಪ್ರತ್ಯಕ್ಷ : ಭಯಭೀತರಾದ ಜನತೆ

10:12 PM May 26, 2021 | Team Udayavani |

ಗಂಗಾವತಿ: ನಗರದ ಜಯನಗರದ ಮಳೆಮಲ್ಲೇಶ್ವರ ಗುಡ್ಡದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ವಾಕಿಂಗ್ ಬಂದವರು ಭಯಭೀತಗೊಂಡ ಘಟನೆ ಬುಧವಾರ ಸಂಜೆ ಜರುಗಿದೆ.

Advertisement

ನಗರದಲ್ಲಿ ಒಂದು ತಿಂಗಳಲ್ಲಿ ಕರಡಿ ಪ್ರತ್ಯಕ್ಷವಾಗುತ್ತಿರುವುದು ಇದು ಎರಡನೇ ಬಾರಿ, 15 ದಿನಗಳ ಹಿಂದೆ ಬಸ್ ಡಿಪೋ ನೀಲಕಂಠೇಶ್ವರ ಕ್ಯಾಂಪ್ ಮೂಲಕ ಕರಡಿಯೊಂದು ಬಂದು ಇಬ್ಬರು ಗೃಹಣಿಯರು ಸೇರಿ ಪಾರ್ಕ್ ನಲ್ಲಿದ್ದ ಪೌರಕಾರ್ಮಿಕನೊರ್ವನನ್ನು ಕಚ್ಚಿ ಗಾಯಗೊಳಿಸಿತ್ತು. ಆರು ದಿನಗಳ ಹಿಂದೆ ಮೂರು ಚಿರತೆಗಳು ಜಯನಗರದ ಸಿದ್ದಿಕೇರಿಯ ಗದ್ದೆಯಲ್ಲಿದ್ದ ಕುರಿ ಹಿಂಡಿನ ಮೇಲೆ ದಾಳಿ ಮಾಡಿ 32 ಕುರಿಗಳನ್ನು ಕೊಂದು ಹಾಕಿದ್ದವು.

ಇದನ್ನೂ ಓದಿ :ಮೈಸೂರು : ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದು, ಮೇಯರ್ ಸ್ಥಾನಕ್ಕೂ ಕಂಟಕ

ಇಂದು ಮತ್ತೆ ಕರಡಿ ಜಯನಗರ ಗುಡ್ಡದಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸಿದೆ. ಸ್ಥಳಕ್ಕೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next