Advertisement

ಮಾಲೇಗಾಂವ್‌:ಕಾಂಗ್ರೆಸ್‌ ಸಂಚಿನಿಂದಾಗಿ ದೋಷಾರೋಪ: ಪ್ರಜ್ಞಾ ಠಾಕೂರ್‌

05:14 PM Oct 30, 2018 | Team Udayavani |

ಮುಂಬಯಿ : 2008ರ ಮಾಲೇಗಾಂವ್‌ ಬ್ಲಾಸ್ಟ್‌ ಕೇಸಿನಲ್ಲಿ ತನ್ನ ವಿರುದ್ಧ ನ್ಯಾಯಾಲಯ ದೋಷಾರೋಪ ಹೊರಿಸುವಲ್ಲಿ ಕಾಂಗ್ರೆಸ್‌ ಪಕ್ಷ ಸಂಚು ನಡೆಸಿದೆ ಎಂದು ಪ್ರಕರಣದ ಓರ್ವ ಆರೋಪಿಯಾಗಿರುವ ಪ್ರಜ್ಞಾ ಠಾಕೂರ್‌ ಆರೋಪಿಸಿದ್ದಾರೆ. 

Advertisement

“ಈ ಮೊದಲು ನನಗೆ ಎನ್‌ಐಎ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿತ್ತು. ಈಗ ಮತ್ತೆ ನನ್ನ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಇದು ಕಾಂಗ್ರೆಸ್‌ ನಡೆಸಿರುವ ಸಂಚಾಗಿದೆ. ಸತ್ಯ ಯಾವತ್ತೂ ಜಯಿಸುತ್ತದೆ ಎನ್ನುವ ವಿಶ್ವಾಸ ನನಗಿದೆ; ಅಂತೆಯೇ ನಾನು ನಿರಪರಾಧಿಯಾಗಿ ಹೊರ ಬರುತ್ತೇನೆ ಎಂಬ ವಿಶ್ವಾಸವೂ ಇದೆ’ ಎಂದು ಪ್ರಜ್ಞಾ ಠಾಕೂರ್‌ ಹೇಳಿದರು. 

ಎನ್‌ಐಎ ಕೋರ್ಟ್‌ ಇಂದು 2008ರ ಮಾಲೇಗಾಂವ್‌ ಬ್ಲಾಸ್ಟ್‌ ಕೇಸಿಗೆ ಸಂಬಂಧಿಸಿ ಪ್ರಜ್ಞಾ ಠಾಕೂರ್‌, ಲೆ| ಕ| ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಮತ್ತು ಇತರ ಐವರು ಆರೋಪಿಗಳ ವಿರುದ್ಧ ದೋಷಾರೋಪ ದಾಖಲಿಸಿಕೊಂಡು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್‌ 2ಕ್ಕೆ ನಿಗದಿಸಿದೆ. 

2008ರ ಸೆ.29ರಂದು ಮಾಲೇಗಾಂವ್‌ ಮಸೀದಿಯ ಸಮೀಪ ಮೋಟಾರ್‌ ಸೈಕಲ್‌ಗೆ ಬಿಗಿಯಲಾಗಿದ್ದ ಸ್ಫೋಟ ಉಪಕರಣವು ಬ್ಲಾಸ್ಟ್‌ ಆದ ಪ್ರಕರಣದಲ್ಲಿ ಆರು ಮಂದಿ ಮಡಿದು ಇತರ ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next