Advertisement

Army: ಸೇನೆ ವಾಪಸ್‌ ಪಡೆಯಲು ಭಾರತಕ್ಕೆ ಮಾಲ್ಡೀವ್ಸ್‌ ತಾಕೀತು

09:43 PM Nov 18, 2023 | Team Udayavani |

ಮಾಲೆ: ಮಾಲ್ಡೀವ್ಸ್‌ನ ಮೇಲೆ ಚೀನಾ ಸರ್ಕಾರದ ಹಿಡಿತ ಇರುವುದು ಸಾಬೀತಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಆ ದೇಶದ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರು ತಮ್ಮ ದೇಶದಲ್ಲಿ ಇರುವ ಯೋಧರನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್‌ ಕರೆಯಿಸಿಕೊಳ್ಳಲು ಭಾರತಕ್ಕೆ ಸೂಚಿಸಿದ್ದಾರೆ. ಮಾಲೆಯಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಕೇಂದ್ರ ಸಚಿವ ಕಿರಣ್‌ ರಿಜಿಜು ಅವರಿಗೆ ಈ ಬಗ್ಗೆ ತಾಕೀತು ಮಾಡಿದ್ದಾರೆ.

Advertisement

ಈ ನಿರ್ಧಾರದ ಹೊರತಾಗಿಯೂ ಭಾರತದ ಜತೆಗೆ ಯಾವತ್ತೂ ಹೊಂದಿರುವ ದ್ವಿಪಕ್ಷೀಯ ಬಾಂಧವ್ಯ ಮುಂದುವರಿಸಿಕೊಂಡು ಹೋಗುವುದಾಗಿ ಮುಯಿಜು ಪ್ರತಿಪಾದಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಜತೆಗೆ ಮಿತ್ರತ್ವದಿಂದ ಇದ್ದ ಇಬ್ರಾಹಿಂ ಮೊಹಮ್ಮದ್‌ ಸೊಲೀಹ್‌ ಅವರನ್ನು ಮುಯಿದು ಸೋಲಿಸಿದ್ದರು. ಪ್ರಚಾರದ ವೇಳೆಯಲ್ಲಿ ಮುಯಿಜು ಅವರು ಇದೇ ಅಂಶವನ್ನು ಪ್ರಧಾನವಾಗಿ ಉಲ್ಲೇಖೀಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next