Advertisement

ಅವಕಾಶ ಸದುಪಯೋಗಪಡಿಸಿಕೊಳ್ಳಿ: ಶಿವಧ್ವಜ ಶೆಟ್ಟಿ  

02:45 AM Jul 14, 2017 | Team Udayavani |

ಸುಳ್ಯ : ಇಲ್ಲಿನ ರೋಟರಿ ಕ್ಲಬ್‌ ಪದಗ್ರಹಣ ಸಮಾರಂಭವು ರೋಟರಿ ಕಮ್ಯುನಿಟಿ ಹಾಲ್‌ನಲ್ಲಿ  ನಡೆಯಿತು.ಪುತ್ತೂರು ರೋಟರಿ ಅಧ್ಯಕ್ಷ ಜಗ ಜೀವನದಾಸ್‌ ರೈ  ಅವರು ಪದಗ್ರಹಣ ನೆರವೇರಿಸಿದರು.

Advertisement

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಚಿತ್ರ ನಟ ಶಿವಧ್ವಜ ಶೆಟ್ಟಿ  ಮಾತನಾಡಿ, ಇಂದು ಅವಕಾಶಗಳು ಎಲ್ಲೆಲ್ಲೂ ಇವೆ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳ ಬೇಕು. ವ್ಯಾಸಂಗ ಸಮಯದಲ್ಲಿ  ತಾನು ಸುಳ್ಯದಲ್ಲಿದ್ದು, ಅದರ ಸವಿನೆನಪನ್ನು ಎಂದೂ ಮರೆಯಲಾರೆ ಎಂದರು.

ರೋಟರಿ ಉಪ ಗವರ್ನರ್‌ ಕೆ. ವಿಶ್ವಾಸ್‌ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಸುಳ್ಯ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಜಿತೇಂದ್ರ ಎನ್‌.ಎ., ಕಾರ್ಯ ದರ್ಶಿಯಾಗಿ ಡಾ| ಪುರುಷೋತ್ತಮ, ಖಜಾಂಚಿಯಾಗಿ ಆನಂದ ಖಂಡಿಗ, ಉಪಾಧ್ಯಕ್ಷರಾಗಿ ದಯಾನಂದ ಆಳ್ವ,  ಜತೆ ಕಾರ್ಯದರ್ಶಿಯಾಗಿ  ಡಾ| ಹರ್ಷವರ್ಧನ, ಸತೀಶ್‌ ಕೆ.ಜಿ., ಸಂಜೀವ ಕುದ್ಪಾಜೆ  ಮತ್ತಿತರ ನಿರ್ದೇಶಕರು ಅಧಿಕಾರ ಸ್ವೀಕರಿಸಿದರು.

ನಿಕಟಪೂರ್ವ ಅಧ್ಯಕ್ಷ ಗಿರಿಜಾ ಶಂಕರ ತುದಿಯಡ್ಕ ಅವರು  ಸಹಕಾರ ನೀಡಿದ ವರಿಗೆ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಕಾರ್ಯದರ್ಶಿ ಡಾ| ಗುರುರಾಜ ವೈಲಾಯ ಅವರು ವರದಿ ವಾಚಿಸಿದರು.

ಸಮ್ಮಾನ
ಡಾ| ಬಿ.ಸಿ. ರಾಯ್‌ ಪ್ರಶಸ್ತಿ ಪುರಸ್ಕೃತ ಡಾ| ಕೆ.ವಿ. ಚಿದಾನಂದ , ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಹಾಗೂ  ಚಿತ್ರ ನಟ ಶಿವಧ್ವಜ ಅವರನ್ನು  ಗೌರವಿಸಲಾಯಿತು.

Advertisement

ಪೂರ್ವಾಧ್ಯಕ್ಷ  ಬೆಳ್ಯಪ್ಪ  ಗೌಡ, ಜಯಶ್ರೀ ಗಿರಿಜಾಶಂಕರ್‌, ಶೈಮಾ ಜಿತೇಂದ್ರ ಹಾಗೂ ಮತ್ತಿತರ ನಿರ್ದೇಶಕರು ಈ ಸಂದರ್ಭ ಉಪಸ್ಥಿತರಿದ್ದರು.

ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ  ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿ ಸಲಾಯಿತು. ವೀಲ್‌ ಚೇರ್‌ ಮತ್ತಿತರ ಕೊಡುಗೆಗಳನ್ನು  ನೀಡಲಾಯಿತು.ದಳ ಸುಬ್ರಾಯ ಭಟ್‌, ಲತಾ ಮಧುಸೂದನ್‌, ಅಬ್ದುಲ್‌ ಕಲಾಂ ಮೊದಲಾದವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next