Advertisement

ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ

05:49 PM Apr 19, 2022 | Shwetha M |

ಇಂಡಿ: ಪಟ್ಟಣದ ಬಿಎಸ್‌ಎನ್‌ಎಲ್‌ ಕಾಂಪೌಂಡ್‌ಗೆ ಹತ್ತಿರದಲ್ಲಿ ಬೀದಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಆಗ್ರಹಿಸಿ ತಾಲೂಕು ಸೌಧ ಎದುರು ಪ್ರತಿಭಟನೆ ನಡೆಸಿ ಸೋಮವಾರ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಅವರಿಗೆ ಮನವಿ ಸಲ್ಲಿಸಿದರು.

Advertisement

ಕಳೆದ ಸುಮಾರು 20 ವರ್ಷದಿಂದ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದು ವ್ಯಾಪಾರ ನಂಬಿ ಜೀವನ ಸಾಗಿಸುತ್ತಿದ್ದಾರೆ. ಒಮ್ಮೆಲೆ ವ್ಯಾಪಾರ ಸ್ಥಗಿತ ಮಾಡಿಸಿದ್ದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಪೊಲೀಸರು ಬಂದ್‌ ಮಾಡಲು ಕಿರುಕುಳ ನೀಡುತ್ತಿದ್ದಾರೆ. ಕೊರೊನಾದಿಂದ ಈಗಾಗಲೇ ವ್ಯಾಪಾರಸ್ಥರು ಕಷ್ಟದಲ್ಲಿದ್ದಾರೆ. ಈಗ ಬೀದಿಯಲ್ಲಿ ವ್ಯಾಪಾರ ಮಾಡುವುದು ಬೇಡವೆಂದರೆ ಜೀವನ ನಡೆಸುವುದು ತೊಂದರೆಯಾಗುತ್ತದೆ ಎಂಬುದು ಅವರ ವಿನಂತಿಯಾಗಿದೆ.

ಜೆಡಿಎಸ್‌ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಬೀದಿ ವ್ಯಾಪಾರಿಗಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಬೀದಿ ವ್ಯಾಪಾರಿಗಳಾದ ಹಾಜಿ ಮಲಂಗ್‌ ಮುಲ್ಲಾ, ಸುಲ್ತಾನ್‌ ಮಕಾಂದಾರ, ಅಲಿಸಾಬ ಬಾಗವಾನ, ರಿಯಾನ್‌ ಶೇಖ್‌, ಆರೀಫ್‌ ಮುಲ್ಲಾ, ಕಿರಣ ಸಾಕುಂಕೆ, ರಜಾಕ್‌ ಬಾಗವಾನ, ಸದ್ದಾಂ ವಾಲೀಕಾರ, ಭೀಮು ಪೂಜಾರಿ, ಮೌಲಾನಾ ಬಾಗವಾನ, ಜೆಡಿ ಎಸ್‌ ಮುಖಂಡರಾದ ಸಿದ್ದು ಡಂಗಾ, ಅಯೂಬ ನಾಟೀಕಾರ, ಶ್ರೀಶೈಲಗೌಡ ಪಾಟೀಲ, ಮಹಿಬೂಬ ಬೇವನೂರ, ನಿಯಾಜ್‌ ಅಗರಖೇಡ, ಇರ್ಫಾನ್‌ ಪಠಾಣ, ಸಂಜು ಪಾಯಕರ, ದುಂಡು ಬಿರಾದಾರ, ರವಿ ಶಿಂಧೆ, ಮರೆಪ್ಪ ಗಿರಣಿವಡ್ಡರ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next