Advertisement

ಕ್ಯಾಂಟೀನ್‌ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

07:18 PM May 15, 2021 | Team Udayavani |

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ಜಾರಿ ಹಿನ್ನೆಲೆ ಬಡವರಹಸಿವು ನೀಗಿಸಲು ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಮೂರು ಹೊತ್ತು ಉಚಿತ ಊಟದ ವ್ಯವಸ್ಥೆಮಾಡಿದ್ದು, ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದ್‌ರೆಡ್ಡಿ, ಅಧಿ ಕಾರಿಗಳು ದಿಢೀರ್‌ ಭೇಟಿ ನೀಡಿ ಆಹಾರಸೇವಿಸಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಎಪಿಎಂಸಿ ಮಾರುಕಟ್ಟೆ ಸಮೀಪದಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ನಗರಸಭೆಅಧ್ಯಕ್ಷ ಹಾಗೂ ಅ ಧಿಕಾರಿಗಳು ಆಹಾರ ಸೇವಿಸಿ,ರುಚಿಯೇ ಇಲ್ಲದ್ದನ್ನು ಕಂಡು ಗುತ್ತಿಗೆದಾರರನ್ನುತರಾಟೆಗೆ ತೆಗೆದುಕೊಂಡರು.

ಬಡವರು, ಕೂಲಿಕಾರ್ಮಿಕರು ಸೇವಿಸುವ ಆಹಾರವನ್ನುರುಚಿಕರವಾಗಿ ತಯಾರಿಸಬೇಕು, ಮತ್ತೂಮ್ಮೆದೂರು ಬಂದರೇ ಕ್ರಮ ಜರುಗಿಸಲಾಗುವುದೆಂದುಎಚ್ಚರಿಕೆ ನೀಡಿದರು. ಈ ವೇಳೆ ಆರೋಗ್ಯ ನಿರೀಕ್ಷಕಿರೇಖಾ, ಮುಕ್ತಾಂಭ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next