Advertisement

ಪಾಕ್ ಮತ್ತು ಬಾಂಗ್ಲಾ ನುಸುಳುಕೋರರ ಸುಳಿವು ಕೊಟ್ಟರೆ ಬಹುಮಾನ!

09:05 AM Mar 01, 2020 | Hari Prasad |

ಮುಂಬಯಿ: ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶದ ನುಸುಳುಕೋರರ ಬಗ್ಗೆ ಮಾಹಿತಿ ನೀಡುವವರಿಗೆ 5,555 ರೂ. ನಗದು ಬಹುಮಾನ ನೀಡುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್‌) ಘೋಷಿಸಿದೆ. ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳುತ್ತಿರುವ ನುಸುಳುಕೋರರು ಭಾರತಕ್ಕೆ ದೊಡ್ಡ ತಲೆನೋವು. ಇವರು ಭಯೋತ್ಪಾದನೆ ನಡೆಸುವ ಉದ್ದೇಶದಿಂದಲೂ ದೇಶಕ್ಕೆ ನುಸುಳಿರುತ್ತಾರೆ.

Advertisement

ಅವರನ್ನು ತಡೆಯಲು ಪೊಲೀಸರಿಗೆ ಆಗದಿದ್ದರೆ, ಎಂಎನ್‌ಎಸ್‌ ಆ ಕೆಲಸವನ್ನು ಮಾಡುತ್ತದೆ ಎಂದು ಹೇಳಿದೆ. ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ಎಂಎನ್‌ಎಸ್‌ ನಾಯಕ ಅಖೀಲ್‌ ಚಿತ್ರೆ, ಬಾಂದ್ರಾ ಪೂರ್ವ ಮತ್ತು ಮುಂಬಯಿನ ಹಲವೆಡೆ ಅಕ್ರಮ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರ ಖಚಿತ ಸುಳಿವು ನೀಡಿದವರಿಗೆ 5,555 ರೂ. ನಗದು ಬಹುಮಾನವನ್ನು ನಮ್ಮ ಪಕ್ಷ ನೀಡುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next