Advertisement

ಮಹಾ ಬಿಜೆಪಿ ಸರ್ಕಾರ ಎನ್ ಸಿಪಿ, ಶಿವಸೇನಾ ಮುಖಂಡರ ದೂರವಾಣಿ ಕದ್ದಾಲಿಸಿತ್ತು: ರಾವತ್ ಟ್ವೀಟ್

10:07 AM Jan 25, 2020 | Team Udayavani |

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎನ್ ಸಿಪಿ ಹಾಗೂ ಶಿವಸೇನಾ ಮುಖಂಡರ ದೂರವಾಣಿ ಕದ್ದಾಲಿಸಲಾಗಿತ್ತು ಎಂದು ಸಚಿವ ಅನಿಲ್ ದೇಶ್ ಮುಖ್ ಆರೋಪಿಸಿದ್ದು, ಈ ಗಂಭೀರ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಶಿವಸೇನಾದ ಸಂಜಯ್ ರಾವತ್ ಕೂಡಾ ದೂರವಾಣಿ ಕದ್ದಾಲಿಕೆ ಬಗ್ಗೆ ದೂರಿದ್ದಾರೆ.

Advertisement

ಈ ಕುರಿತು ರಾವತ್ ಶುಕ್ರವಾರ ಟ್ವೀಟ್ ಮಾಡಿದ್ದು, ನಿಮ್ಮ ಫೋನ್ ಅನ್ನು ಕದ್ದಾಲಿಸಲಾಗುತ್ತಿದೆ ಎಂದು ಹಿಂದಿನ ಬಿಜೆಪಿ ಸರ್ಕಾರದ ಹಿರಿಯ ಸಚಿವರೊಬ್ಬರು ನನಗೆ ಹೇಳಿದ್ದು. ಅದಕ್ಕೆ ನಾನು ಹೇಳಿದ್ದೆ, ನನ್ನ ಸಂಭಾಷಣೆಯನ್ನು ಉಚಿತವಾಗಿ ಆಲಿಸಲಿ. ನಾನು ಬಾಳಾಸಾಹೇಬ್ ಠಾಕ್ರೆಯವರ ಅನುಯಾಯಿ. ನಾನು ಯಾವುದನ್ನೂ ಗುಪ್ತವಾಗಿಟ್ಟು ವ್ಯವಹರಿಸಲ್ಲ ಎಂದು ತಿಳಿಸಿರುವುದಾಗಿ ಉಲ್ಲೇಖಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯೇತರ ಮುಖಂಡರ ದೂರವಾಣಿ ಕದ್ದಾಲಿಸಲಾಗುತ್ತಿದೆ ಎಂಬ ಆರೋಪದ ನಂತರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ತನಿಖೆ ನಡೆಸಲು ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next