Advertisement

ದ್ರವ ಔಷಧಗಳ ಪರಿಶಿಲನೆಗೆ ಆದೇಶ

07:55 PM Oct 13, 2022 | Team Udayavani |

ಮುಂಬೈ:  ಮಹಾರಾಷ್ಟ್ರದ  ಔಷಧ ಕಂಪನಿಗಳಲ್ಲಿ ಉತ್ಪಾದನೆಯಾಗುತ್ತಿರುವ ಎಲ್ಲ ರೀತಿಯ ದ್ರವ ಔಷಧಗಳನ್ನು ಪರಿಶೀಲನೆ ನಡೆಸಲು ಮಹಾರಾಷ್ಟ್ರದ ಔಷಧ ನಿಯಂತ್ರಣ ಮಂಡಳಿ ಆದೇಶಿಸಿದೆ. ಹಾಗೆಯೇ ಔಷಧಗಳಲ್ಲಿ ಡೈಎಥಿಲಿನ್‌ ಗ್ಲೈಸಾಲ್‌ ಮತ್ತು ಎಥಿಲಿನ್‌ ಗ್ಲೈಸಾಲ್‌ ಪ್ರಮಾಣದ ಕುರಿತಾಗಿ ವರದಿ ನೀಡುವಂತೆಯೇ ಸಂಸ್ಥೆಗಳಿಗೆ ಸೂಚಿಸಲಾಗಿದೆ.

Advertisement

ಹರ್ಯಾಣ ಮೂಲದ ಮೇಡನ್‌ ಫಾರ್ಮಾಸ್ಫುಟಿಕಲ್ಸ್‌ನ ಕಾಫ್ ಸಿರಪ್‌ ಸೇವಿಸಿ ಗ್ಯಾಂಬಿಯಾದಲ್ಲಿ 69 ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನುವ ವರದಿಯ ಬೆನ್ನಲ್ಲೇ ಹರ್ಯಾಣ ಸರ್ಕಾರ ಮೇಡನ್‌ನ ಎಲ್ಲ ಔಷಧ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಅದರ ಬೆನ್ನಲ್ಲೇ ಮಹಾರಾಷ್ಟ್ರ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಔಷಧೀಯ ಸಂಸ್ಥೆಗಳ ಈ ಪರಿಶೀಲನೆಗೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next