Advertisement

ಬೆಲೆ ಏರಿಕೆ ಬಗ್ಗೆ ಮೌನ; ಅಮಿತಾಬ್, ಅಕ್ಷಯ್ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಡಲ್ಲ:ಪಾಟೋಲೆ

05:50 PM Feb 19, 2021 | Team Udayavani |

ಮುಂಬೈ: ಪೆಟ್ರೋಲ್ ಸೇರಿದಂತೆ  ಇತರೆ ತೈಲಗಳ ಬೆಲೆ ಏರಿಕೆ ಕುರಿತು ಮೌನವಾಗಿದ್ದಾರೆ ಎಂದು ಖ್ಯಾತ ಬಾಲಿವುಡ್ ನಟರುಗಳಾದ ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ವಿರುದ್ಧ ಮಹಾರಾಷ್ಟ್ರ  ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಈ  ನಟರುಗಳ ಸಿನಿಮಾ ಚಿತ್ರೀಕರಣ ನಡೆಸುವುದನ್ನು ಮತ್ತು ಸಿನಿಮಾ ಬಿಡುಗಡೆಗೊಳಿಸುವುದನ್ನು ತಡೆಯುವುದಾಗಿ ತಿಳಿಸಿದೆ.

Advertisement

ಈ ಕುರಿತಾಗಿ ಮಾತನಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ನಾನಾ ಪಾಟೋಲೆ ಮೋದಿ ಸರ್ಕಾರ ತೈಲ ಬೆಲೆಯನ್ನು ಏರಿಕೆ ಮಾಡಿದೆ. ಇದರಿಂದ ಸಾಮಾನ್ಯರಿಗೆ ಬಹಳಾ ಸಮಸ್ಯೆಗಳಾಗಿದೆ. ಆದರೆ ಈ  ಕುರಿತಾಗಿ ನಟರುಗಳಾದ ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ದನಿ ಎತ್ತಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸೇನಾ ಶಾಲೆಗಳ ಆರ್ಥಿಕ ಸುಸ್ಥಿರತೆಗಾಗಿ ಸೇನೆ, ಇಂದ್ರಾಣಿ ಬಾಲನ್ ಫೌಂಡೇಶನ್ ಒಪ್ಪಂದ

ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಇಂತಹ ವಿಚಾರಗಳಲ್ಲಿ  ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್  ವಿರೋಧ ವ್ಯಕ್ತಪಡಿಸುತ್ತಿದ್ದರು. ಅಂದಿನ ಕಾಲದಲ್ಲಿ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಬದ್ಧವಾಗಿತ್ತು. ಆಗ ಯಾರು ಬೇಕಾದರೂ ಸರ್ಕಾರದ ನಿರ್ಧಾರಗಳ ವಿರುದ್ಧ ಮಾತನಾಡಬಹುದಾಗಿತ್ತು ಎಂದಿರುವ  ನಾನಾ ಪಾಟೋಲೆ, ಈಗ ಸೆಲೆಬ್ರಿಟಿಗಳು ಬಿಜೆಪಿ ಸರ್ಕಾರದ ಕೈಗೊಂಬೆಗಳಾಗಿದ್ದಾರೆ ಹಾಗಾಗಿ ಸರ್ಕಾರದ ಯಾವುದೇ ನಿರ್ಧಾರದ ಕುರಿತಾಗಿ ದನಿ ಎತ್ತುತ್ತಿಲ್ಲ ಎಂದು ಹೇಳಿದ್ದು, ಇಂತಹ ನಟರ ಸಿನಿಮಾಗಳ ಚಿತ್ರೀಕರಣ ಹಾಗೂ ಪ್ರದರ್ಶನ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next